ADVERTISEMENT

‘ಸೈತಾನ್‌’ ಮೂಲಕ ಅನುಶ್ರೀ ಮತ್ತೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 10:53 IST
Last Updated 21 ಫೆಬ್ರುವರಿ 2022, 10:53 IST
ಶೀರ್ಷಿಕೆ ಅನಾವರಣಗೊಳಿಸಿದ ನಟಿಯರಾದ ಅದಿತಿ ಪ್ರಭುದೇವ ಹಾಗೂ ಭಾವನಾ ರಾವ್‌
ಶೀರ್ಷಿಕೆ ಅನಾವರಣಗೊಳಿಸಿದ ನಟಿಯರಾದ ಅದಿತಿ ಪ್ರಭುದೇವ ಹಾಗೂ ಭಾವನಾ ರಾವ್‌   

2017ರಲ್ಲಿ ತೆರೆಕಂಡ ‘ಉಪ್ಪು ಹುಳಿ ಖಾರ’ ಸಿನಿಮಾದ ಬಳಿಕ ಬೆಳ್ಳಿತೆರೆಯಿಂದ ದೂರವಾಗಿದ್ದ ನಟಿ, ನಿರೂಪಕಿ ಅನುಶ್ರೀ ಇದೀಗ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹಾರರ್‌ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅನುಶ್ರೀ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದರು. ಇದೀಗ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.

‘ಮಮ್ಮಿ’, ‘ದೇವಕಿ’ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್.ಎಚ್‌ ನಿರ್ಮಾಣದಲ್ಲಿ ಅನುಶ್ರೀ ನಟನೆ ಹೊಸ ಸಿನಿಮಾ ‘ಸೈತಾನ್‌’ ತೆರೆಕಾಣಲಿದೆ. ಪಾರ್ಥಿಬನ್ ಅವರು ನಿರ್ಮಾಣದಲ್ಲಿ ಲೋಹಿತ್ ಅವರಿಗೆ ಜೊತೆಯಾಗಿದ್ದಾರೆ. ಲೋಹಿತ್ ಬಳಿಯಲ್ಲೇ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಪ್ರಭಾಕರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ನಟಿಯರಾದ ಅದಿತಿ ಪ್ರಭುದೇವ, ಭಾವನಾರಾವ್, ಸಂಭಾಷಣೆಕಾರ ಮಾಸ್ತಿ ಮುಂತಾದವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು.

‘ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ’ ಎಂದರು ಲೋಹಿತ್.

ADVERTISEMENT

‘ಉಪ್ಪು ಹುಳಿ ಖಾರ ಚಿತ್ರದ ನಂತರ ಸ್ಯಾಂಡಲ್‌ವುಡ್‌ಗೆ ಮತ್ತೊಮ್ಮೆ ನನ್ನ ಮರುಪ್ರವೇಶ ಎನ್ನಬಹುದು. ಇದರಲ್ಲಿ ಹೀರೊ, ಹೀರೊಯಿನ್‌ ಎಂದಿಲ್ಲ. ಕಥೆಯೇ ನಿಜವಾದ ಹೀರೊ’ ಎನ್ನುತ್ತಾರೆ ಅನುಶ್ರೀ. ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅನುಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.