ADVERTISEMENT

ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:30 IST
Last Updated 26 ಜನವರಿ 2020, 19:30 IST
ಎಂ.ಜಿ.ಆರ್‌ ಪಾತ್ರದಲ್ಲಿ ಅರವಿಮದ ಸ್ವಾಮಿ
ಎಂ.ಜಿ.ಆರ್‌ ಪಾತ್ರದಲ್ಲಿ ಅರವಿಮದ ಸ್ವಾಮಿ   

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ನೈಜ ಜೀವನ ಕತೆ ಆಧರಿಸಿದ ‘ತಲೈವಿ’ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಬಾಲಿವುಡ್‌ ನಟಿ ಕಂಗನಾ ರನೋಟ್‌ ಈ ಬಯೋಪಿಕ್‌ನಲ್ಲಿ ಜಯಾ ಪಾತ್ರದಲ್ಲಿ ಮಿಂಚಲಿದ್ದಾರೆ.

ತಮಿಳರ ನೆಚ್ಚಿನ ನಟ ಎಂ.ಜಿ. ರಾಮಚಂದ್ರನ್‌ ಪಾತ್ರದಲ್ಲಿನಟ ಅರವಿಂದ ಸ್ವಾಮಿ ನಟಿಸಿದ ದೃಶ್ಯಗಳಿರುವ ಟೀಸರ್‌ ಕ್ಲಿಪ್‌ಗಳನ್ನು ತಲೈವಿ ಚಿತ್ರತಂಡ ಬಿಡುಗಡೆ ಮಾಡಿದೆ.ಎಂ.ಜಿ.ಆರ್‌ ಜನ್ಮದಿನದಂದು ಮೊದಲ ಲುಕ್‌ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಫೋಟೊ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ ಭಾರಿ ಸದ್ದು ಮಾಡುತ್ತಿದೆ.

ಗುಂಗುರು ಕೂದಲು, ಕಪ್ಪು ಕನ್ನಡಕದಲ್ಲಿಎಂ.ಜಿ.ಆರ್‌ ಗೆಟಪ್‌ನಲ್ಲಿರುವ ಅರವಿಂದ ಸ್ವಾಮಿ ಥೇಟ್‌ ಹದಿಹರೆಯದ ಎಂ.ಜಿ.ಆರ್‌ ನಕಲಿನಂತೆ ಕಾಣುತ್ತಿದ್ದಾರೆ. ಪಾತ್ರಕ್ಕಾಗಿ ಅವರು ಮೀಸೆ ಕೂಡ ತೆಗೆದಿದ್ದಾರೆ.

ADVERTISEMENT

ಎಂ.ಜಿ.ಆರ್‌ ನಾಯಕ ನಟರಾಗಿ ನಟಿಸಿದ್ದ ಕಪ್ಪುಬಿಳುಪು ಚಿತ್ರದ ಪ್ರಸಿದ್ಧ ಹಾಡು ‘ನಾನ್‌ ಉಂಗಳ್‌ ವೀಟು ಪಿಳೈ’ ಹಾಡಿಗೆ ಅರವಿಂದ ಸ್ವಾಮಿ ಹೆಜ್ಜೆ ಹಾಕಿದ್ದಾರೆ.

ಇಡೀ ಹಾಡನ್ನು ಮೂಲ ಹಾಡಿನಂತೆಯೇ ರೀ ಕ್ರಿಯೇಟ್‌ ಮಾಡಲಾಗಿದೆ. ಥೇಟ್‌ ಎಂ.ಜಿ.ಆರ್‌ ಅವರಂತೆಯೇ ಸೂಟ್‌, ಬೂಟು ಧರಿಸಿದ ಅರವಿಂದ ಸ್ವಾಮಿ ಅವರು ಎಂ.ಜಿ.ಆರ್‌ ಅವರ ಮ್ಯಾನಸಿರಂ ಅನ್ನೂ ಯಥಾವತ್ತಾಗಿ ಅನುಕರಿಸಿದ್ದಾರೆ. ಹಾಡಿನಲ್ಲಿರುವ ಸಹ ಕಲಾವಿದರು ಕೂಡ ಮೂಲ ಚಿತ್ರದ ಕಲಾವಿದರನ್ನೇ ಹೋಲುತ್ತಾರೆ.

ಈ ಟೀಸರ್‌ ಬಗ್ಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.