ADVERTISEMENT

ಯೋಗರಾಜ್‌ ಭಟ್‌ ಅವರ ‘ಗರಡಿ’ಮನೆ ಪ್ರವೇಶಿಸಿದ ದರ್ಶನ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 20:33 IST
Last Updated 19 ಸೆಪ್ಟೆಂಬರ್ 2023, 20:33 IST
ಚಿತ್ರದ ವಿಶೇಷ ಪೋಸ್ಟರ್‌
ಚಿತ್ರದ ವಿಶೇಷ ಪೋಸ್ಟರ್‌   

ಯೋಗರಾಜ್‌ ಭಟ್‌ ಅವರ ‘ಗರಡಿ’ ಸಿನಿಮಾದಲ್ಲಿ ನಟ ದರ್ಶನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಇತ್ತೀಚೆಗಷ್ಟೇ ವಿಶೇಷ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ನವೆಂಬರ್‌ 10ಕ್ಕೆ ಚಿತ್ರ ತೆರೆಗೆ ಬರುತ್ತಿರುವುದಾಗಿ ಘೋಷಿಸಿದೆ. 

‘ವಿಶೇಷ ಪಾತ್ರದಲ್ಲಿ ನಟಿಸಿದ್ದರೂ ತೆರೆಯ ಮೇಲೆ ದರ್ಶನ್‌ ಕೆಲಕಾಲ ಕಾಣಿಸಿಕೊಳ್ಳುತ್ತಾರೆ. ನಾಯಕನ ಸ್ನೇಹಿತನಾಗಿ ಬರುತ್ತಾರೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 

ಪಾರಂಪರಿಕ ಕ್ರೀಡೆಗಳಲ್ಲಿ ಒಂದಾದ ಕುಸ್ತಿಯನ್ನು ಆಧರಿಸಿದ ಚಿತ್ರವಿದು. ಬಿ.ಸಿ.ಪಾಟೀಲ್‌ ತಮ್ಮ ಕೌರವ ಪ್ರೊಡಕ್ಷನ್‌ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ‘ಶಿಶಿರ’, ‘ಚಿಂಗಾರಿ’ ಚಿತ್ರಗಳಲ್ಲಿ ನಟಿಸಿದ್ದ ಯಶಸ್ ಸೂರ್ಯ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌

ADVERTISEMENT

ಖಳನಾಯಕ ರವಿಶಂಕರ್‌, ಬಿ.ಸಿ.ಪಾಟೀಲ್‌ ಕೂಡ ಚಿತ್ರದಲ್ಲಿದ್ದಾರೆ. ಯೋಗರಾಜ್‌ ಭಟ್‌ ಸಾಹಿತ್ಯವಿರುವ ಈ ಚಿತ್ರದ ‘ಹೊಡಿರಲೆ ಹಲಗಿ’ ಎಂಬ ವಿಶೇಷವಾದ ಹಾಡು ಈಗಾಗಲೇ ಬಿಡುಗಡೆಗೊಂಡು ಜನಪ್ರಿಯವಾಗಿದೆ. ವಿ.ಹರಿಕೃಷ್ಣ ಸಂಗೀತ, ಎ ಆರ್‌ ನಿರಂಜನ್‌ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.