ಬೆಂಗಳೂರು: 'ನನಗೆ ಬದುಕುವ ಆಸೆಯೇ ಇಲ್ಲವಾಗಿತ್ತು, ಜೀವನದ ಮೇಲೆ ನಂಬಿಕೆ ಕಳೆದುಕೊಂಡಿದ್ದೆ' ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಟಿವಿ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ಪತಿ ಸೀಸನ್ 13ರಲ್ಲಿ ಭಾಗವಹಿಸಿದ್ದ ಅವರು, 2014ರಲ್ಲಿ ತಾನು ಖಿನ್ನತೆಗೆ ಒಳಗಾಗಿದ್ದೆ ಎನ್ನುವ ಸಂಗತಿಯನ್ನು ಹಂಚಿಕೊಂಡಿದ್ದಾರೆ.
'ನಾನು ಮತ್ತೆ ಚಿತ್ರರಂಗ ಪ್ರವೇಶಿಸಬಹುದು ಎಂದುಕೊಂಡಿರಲಿಲ್ಲ. ಜನರೊಡನೆ ಮತ್ತೆ ಮಾತನಾಡುವುದು ಅಸಾಧ್ಯ ಎನ್ನಿಸತೊಡಗಿತ್ತು. ಹೊರಗಡೆ ಹೋಗಲಾರದೇ, ಮನೆಯಲ್ಲೂ ಇರಲಾರದೆ ಮಾನಸಿಕವಾಗಿ ತೊಂದರೆ ಅನುಭವಿಸಿದ್ದೆ. ನನ್ನ ಜೀವನಕ್ಕೆ ಅರ್ಥವಿಲ್ಲ ಎಂಬ ಭಾವನೆ ಮೂಡಿತ್ತು' ಎಂದು ದೀಪಿಕಾ ಮನಸು ಬಿಚ್ಚಿ ಮಾತನಾಡಿದ್ದಾರೆ.
ಖಿನ್ನತೆ ಕುರಿತು ಈ ಹಿಂದೆಯೂ ದೀಪಿಕಾ ಮಾತನಾಡಿದ್ದರು.
ಜತೆಗೆ ಅಂತಹ ಪರಿಸ್ಥಿತಿ ಎದುರಾದಾಗ ಮನೆಯವರ ಸಹಕಾರ ಮತ್ತು ವೈದ್ಯರ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂಬ ಸಲಹೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.