‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ ನಟ ದಿಗಂತ್. ಹೊಸ ಚಿತ್ರವೊಂದು ಸದ್ದಿಲ್ಲದೇ ನಿರ್ಮಾಣ ಮುಗಿಸಿ ಡಿಸೆಂಬರ್ 31ಕ್ಕೆ ಬಿಡುಗಡೆ ಆಗಲಿದೆ.
ಚಿತ್ರಕ್ಕೆ ಯೋಗರಾಜ್ ಭಟ್ ಅವರು ಎಣ್ಣೆ ಪಾರ್ಟಿಯ ಹಾಡೊಂದನ್ನು ಬರೆದು ಕಲಾವಿದರನ್ನು ಕುಣಿಸಿದ್ದಾರೆ. ಹಾಡು ಶುಕ್ರವಾರ ಯುಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಅಂದಹಾಗೆ, ‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’ ದಿಗಂತ್ ಅವರ ಚಿತ್ರಕ್ಕೆ ಭಟ್ಟರು ಹಾಡು ಬರೆದಿದ್ದಾರೆ.
ಚಿತ್ರಕ್ಕೆ ನಾಗರಾಜ್ ಬೇತೂರು ನಿರ್ದೇಶನವಿದೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.