ADVERTISEMENT

ನಿರ್ಮಾಪಕ ಹೆಚ್.ಕೆ. ಶ್ರೀನಿವಾಸ್ ನಿಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 6:32 IST
Last Updated 24 ಅಕ್ಟೋಬರ್ 2020, 6:32 IST
ಹೆಚ್.ಕೆ. ಶ್ರೀನಿವಾಸ್
ಹೆಚ್.ಕೆ. ಶ್ರೀನಿವಾಸ್   

ಬೆಂಗಳೂರು: ನಿರ್ಮಾಪಕ ಹೆಚ್.ಕೆ .ಶ್ರೀನಿವಾಸ್ (ಬೇಕರಿ ಶಿವ) ಶನಿವಾರ ನಿಧನರಾಗಿದ್ದಾರೆ.

ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

ಅನಾರೋಗ್ಯದ ಕಾರಣ ರಂಗದೊರೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ADVERTISEMENT

ಶ್ರೀನಿವಾಸ್ ಅವರು ಮಾಯಾ ಮುಸುಕು, ಗುಂಡನ ಮದುವೆ, ಪಟ್ಟಣಕ್ಕೆ ಬಂದ ಪುಟ್ಟ, ಚಂದನ ಚಿಗುರು, ಕುರುನಾಡು, ಹಾಗೂ ಗುರುಕುಲ. ತಮ್ಮ ಗುರುಕುಲ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿತ್ತು.

ಮೃತರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.