ಅಮೃತವರ್ಷಿಣಿ,ಹಾಲಿವುಡ್, ಅಭಿ ಮುಂತಾದ ಯಶಸ್ವಿಸಿನಿಮಾಗಳನ್ನು ನೀಡಿದ ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ ‘ಹಗಲುಗನಸು’ ಚಿತ್ರ ಇದೇ 6ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಈ ಸುದ್ದಿ ಹಂಚಿಕೊಳ್ಳಲು ನಿರ್ದೇಶಕರು ಚಿತ್ರ ತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.
ಮಾಸ್ಟರ್ ಆನಂದ್ ಮತ್ತು ಸನಿಹಾ ಯಾದವ್ ನಾಯಕ–ನಾಯಕಿಯಾಗಿ ನಟಿಸಿದ್ದು, ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಚಿತ್ರ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುವುದು ಖಚಿತ ಎಂದು ದಿನೇಶ್ ಬಾಬುಖಷಿಯಿಂದ ಮಾತು ಆರಂಭಿಸಿದರು.ನಿರ್ದೇಶನದ ಜತೆಗೆ ಛಾಯಾಗ್ರಹಣ, ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿರುವುದಾಗಿ ತಿಳಿಸಿದರು.
ನಾಲ್ಕು ದಿನಗಳಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯೇ ಚಿತ್ರದ ಜೀವಾಳ. ಚಿತ್ರದ ನಾಯಕನಿಗೆ ಹೆಚ್ಚು ಹಗಲುಗನಸು ಬೀಳುತ್ತವೆ. ಆ ಹಗಲುಗನಸುಗಳ ಸುತ್ತವೇ ಕಥೆ ಹೆಣೆಯಲಾಗಿದೆ. ನಾಯಕನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ, ಮಿಂಚುವ ಪಾತ್ರದಲ್ಲಿ ನಾಯಕಿಯಾಗಿ ಸನಿಹಾ ಯಾದವ್ ನಟಿಸಿದ್ದಾರೆ.
ಆನಂದ್ ಜತೆಗೆ ಅಶ್ವಿನ್ ಹಾಸನ್ ಮತ್ತು ನೀನಾಸಂ ಅಶ್ವತ್ಥ್ ಕೂಡ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಅಶ್ವತ್ಥ್ಗೆ ಜತೆಯಾಗಿ ವಾಣಿಶ್ರೀ ಕಾಣಿಸಿಕೊಂಡಿದ್ದಾರೆ.
ಹಿರಿಯ ನಟ ಮನ್ದೀಪ್ ರಾಯ್ ಅವರದ್ದು. ಈಚಿತ್ರದಲ್ಲಿದೆವ್ವದ ಪಾತ್ರ. ಹಾಗಂಥ ಇದು ಹಾರಾರ್ ಸಿನಿಮಾವಲ್ಲ ಎನ್ನುವ ಸ್ಪಷ್ಟನೆಯನ್ನು ನಿರ್ದೇಶಕರು ಆರಂಭದಲ್ಲೇ ನೀಡಿದ್ದರು. ಮನ್ದೀಪ್ ಅವರದ್ದು ಒಳ್ಳೆಯ ದೆವ್ವದ ಪಾತ್ರವಂತೆ. ಮನೆಯ ವರಾಂಡಾದಲ್ಲಿಯೇ ಕುಳಿತು, ಎಲ್ಲರ ಚಟುವಟಿಕೆಗಳನ್ನೂ ಅವಲೋಕಿಸುವ, ಎಲ್ಲರನ್ನೂ ನಕ್ಕು ನಗಿಸುವ ಕಾಮಿಡಿ ದೆವ್ವವಂಥೆ!
ಚಿತ್ರಕ್ಕೆಪದ್ಮನಾಭ ಮತ್ತು ಅಚ್ಯುತ್ ರಾಜ್ ಬಂಡವಾಳ ಹೂಡಿದ್ದಾರೆ.ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.