ಬೆಂಗಳೂರು: ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎಂದು ಹೇಳುತ್ತಾ ಹೊಂಬಾಳೆ ಫಿಲ್ಮ್ಸ್ ತನ್ನ ನಿರ್ಮಾಣದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆಯ ಸುಳಿವು ನೀಡಿದೆ. ಅಂದಹಾಗೆ ನಾಳೆ ಬೆಳಿಗ್ಗೆ 11.43ಕ್ಕೆ ಹೊಸ ಶೀರ್ಷಿಕೆ ಮತ್ತು ಫಸ್ಟ್ಲುಕ್ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವಿಟರ್ನಲ್ಲಿ ಹೇಳಿಕೊಂಡಿದೆ.
ಬೆಂಕಿಯ ಉಂಗುರದ ಚಿತ್ರವನ್ನಷ್ಟೇ ಪ್ರಕಟಿಸಿ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎಂಬ ಸಾಲನ್ನು ಬರೆಯಲಾಗಿದೆ.
ಕೆಜಿಎಫ್ ಚಾಪ್ಟರ್ 2ನ ಅಧಿಕೃತ ಬಿಡುಗಡೆಯ ದಿನಾಂಕ ಘೋಷಿಸಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ, ಇದೊಂದು ಹೊಸ ಯೋಜನೆಯ ಪೋಸ್ಟರ್ ಎಂಬ ಸುಳಿವು ನೀಡಿದೆ ಹೊಂಬಾಳೆ ಫಿಲ್ಮ್ಸ್.
ಈಗಾಗಲೇ ಇದೇ ಸಂಸ್ಥೆ ‘ದ್ವಿತ್ವ’ ಚಿತ್ರ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ತ್ರಿಶಾ ಕೃಷ್ಣನ್ ಅವರು ಇತ್ತೀಚೆಗೆ ‘ದ್ವಿತ್ವ’ ತಂಡವನ್ನು ಸೇರಿದ್ದರು. ಪ್ರಭಾಸ್ ಅಭಿನಯದ ‘ಸಲಾರ್’ ನಿರ್ಮಾಣವೂ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.