ADVERTISEMENT

#MeToo: ನಿರ್ದೇಶಕರ ಸಂಘ, ಗುರುಪ್ರಸಾದ್‌ ವಿರುದ್ಧ ಹರಿಹಾಯ್ದ ಹುಚ್ಚ ವೆಂಕಟ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 2:41 IST
Last Updated 1 ನವೆಂಬರ್ 2018, 2:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಟಿಯರು ತಮ್ಮ 'ಪಾತಿವ್ರತ್ಯ' ಸಾಬೀತುಮಾಡಲು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್‌ ವಿರುದ್ಧ ನಟ ಹುಚ್ಚ ವೆಂಕಟ್‌ ಹರಿಹಾಯ್ದಿದ್ದಾರೆ.

ನಿರ್ದೆಶಕರ ಸಂಘ ಹಾಗೂ ಮೀಟೂ ಆರೋಪ ಕುರಿತು ವೆಂಕಟ್‌ ಮಾತನಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಟಿಯರ ಮೇಲೆ ನಿಷೇಧ ಏರಲು ನೀವು ಯಾರು? ಅವರಿಗೆ ಆಗಿರುವ ಕಷ್ಟಗಳನ್ನು ನೀವು ನೋಡಿದ್ದೀರಾ? ಸಂಘದಲ್ಲಿರುವವರಿಗೆ ತಾಯಿ, ಅಕ್ಕ–ತಂಗಿಯರು ಯಾರು ಇಲ್ವಾ? ಎಂದು ನಿರ್ದೇಶಕ ಸಂಘವನ್ನು ಪ್ರಶ್ನಿಸಿದ್ದಾರೆ.

ADVERTISEMENT

ನಿರ್ದೇಶಕರು ನಟಿಯರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಟಿಯರು ಮಡಿವಂತಿಕೆ ಬಿಟ್ಟು ಸಿನಿಮಾರಂಗಕ್ಕೆ ಬರಬೇಕು ಎಂದು ಹಿರಿಯ ನಟ ರಾಜೇಶ್‌ ಅವರು ಹೇಳಿಕೆ ನೀಡಿರುವುದು ಸರಿಯಾಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಟಿಯರ 'ಪಾತಿವ್ರತ್ಯ' ಕುರಿತು ನಿರ್ದೇಶಕ ಗುರುಪ್ರಸಾದ್‌ ಮಾತನಾಡಿದ್ದು ಸರಿಯಾಲ್ಲ ಎಂದು ಹೇಳಿದ್ದಾರೆ.

ಇತ್ತೀಚಿಗೆ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ವಿರುದ್ಧ ನಿರ್ದೇಶಕ ಗುರುಪ್ರಸಾದ್‌ ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.