‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರದ ಇನ್ನೊಂದು ಹಾಡು ಅ. 30ರಂದು ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳ್ಳಲಿದೆ. ಮೊದಲ ಹಾಡನ್ನು ಮಾರ್ಚ್ನಲ್ಲಿ ಡಾಲಿ ಧನಂಜಯ ಅವರು ಬಿಡುಗಡೆ ಮಾಡಿದ್ದರು.
ಈ ಹಾಡನ್ನು ನಟ ವಿಜಯ ರಾಘವೇಂದ್ರ ಬಿಡುಗಡೆ ಮಾಡಲಿದ್ದಾರೆ.ಕಿರಣ್ ರಾಜ್, ಶ್ರೀಹರ್ಷ, ಪವಿತ್ರಾ ಕೋಟ್ಯಾನ್ ಮತ್ತು ಅನಿಕಾ ರಮ್ಯ ತಾರಾಗಣದಲ್ಲಿದ್ದಾರೆ.ರಾಜು ಭಂಡಾರಿ ರಾಜಾವರ್ತ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆರ್ಯ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಲಲಿತಾ ರಾಜಶೇಖರ್ ಶಿರಹಟ್ಟಿ ಅವರು ಚಿತ್ರ ನಿರ್ಮಿಸುತ್ತಿದ್ದಾರೆ.
ಈ ಹಾಡಿಗೆ ಅತಿಶಯ ಜೈನ್ ರಾಗಸಂಯೋಜನೆ ಮಾಡಿದ್ದಾರೆ. ಶ್ರೀಹರ್ಷ ಅವರೇ ಹಾಡಿದ್ದಾರೆ.
ಯಥಾ ದೃಷ್ಟಿ ತಥಾ ಸೃಷ್ಟಿ ಎಂಬ ಭಗವದ್ಗೀತೆಯ ಸೂಕ್ತಿಯ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರದ ಕಥಾವಸ್ತುವು ಮನರಂಜನೆ ಹಾಗೂ ಸಾಮಾಜಿಕ ಕಳಕಳಿಯ ಸಂದೇಶದಿಂದ ಕೂಡಿದೆ ಎಂದು ರಾಜು ಭಂಡಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.