ADVERTISEMENT

ಕನ್ನಡ ಹಾರರ್‌ ಚಿತ್ರ: ‘ಇಲ್ಲಿಂದ ಆರಂಭವಾಗಿದೆ’ ಇನ್ನೊಂದು ಚಿತ್ರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:30 IST
Last Updated 21 ಅಕ್ಟೋಬರ್ 2021, 19:30 IST
ಕೀರ್ತಿಕೃಷ್ಣ, ನಿಖಿತಾಸ್ವಾಮಿ
ಕೀರ್ತಿಕೃಷ್ಣ, ನಿಖಿತಾಸ್ವಾಮಿ   

‘ಇಲ್ಲಿಂದ ಆರಂಭವಾಗಿದೆ’ ಹಾರರ್‌ ಚಿತ್ರಗಳ ಸಾಲಿಗೆ ಇನ್ನೊಂದು ಸೇರ್ಪಡೆ. ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಈ ಚಿತ್ರದ ನಿರ್ಮಾಪಕ ಮತ್ತು ಸಿಐಡಿ ಪಾತ್ರಧಾರಿಯಾಗಿದ್ದಾರೆ. ಲಕ್ಷಣಚಪರ್ಲ ನಿರ್ದೇಶಕರು.

ಕುತೂಹಲ, ಹಾರರ್‌, ನವಿರು ಪ್ರೀತಿ, ತಾಯಿ ಮಗಳ ಬಾಂಧವ್ಯ ಇತ್ಯಾದಿ ಕಥೆಯ ಹೂರಣ ಚಿತ್ರದಲ್ಲಿದೆ. ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಎಂದು ಹೇಳಿದ್ದೇವೆ ಎಂದಿದೆ ಚಿತ್ರ ತಂಡ.

ಕೀರ್ತಿಕೃಷ್ಣ ನಾಯಕ. ನಿಖಿತಾಸ್ವಾಮಿ ಮತ್ತು ಮಧುಬಾಲ ನಾಯಕಿಯರು. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್‌ರಾವುತ್, ಶಾಹುರಾಜ್‌ ಶಿಂದೆ ಹಾಗೂ ಮಗಧೀರ ಖ್ಯಾತಿಯ ದೇವ್‌ಗಿಲ್ ಹಾಗೂ ಕನಕಪುರದ ಸ್ಥಳೀಯ ಕಲಾವಿದರು ಇದ್ದಾರೆ. ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪುಷ್ಪ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸದ್ಯದಲ್ಲೆ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.