ADVERTISEMENT

ಸೆ. 6ರಿಂದ ಮೈಸೂರಿನಲ್ಲಿ ಕನ್ನಡ ಚಲನಚಿತ್ರ ಕಪ್‌ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 9:55 IST
Last Updated 29 ಜುಲೈ 2019, 9:55 IST

ಕನ್ನಡ ಚಲನಚಿತ್ರ ಕಪ್‌ನ ಮೂರನೇ ಆವೃತ್ತಿಯು ಮೈಸೂರಿನಲ್ಲಿ ಸೆಪ್ಟೆಂಬರ್‌ 6ರಿಂದ 8ರವರೆಗೆ ನಡೆಯಲಿದೆ.

ಈ ಬಾರಿ ಪ್ರತಿ ತಂಡವೂ ಐದು ಪಂದ್ಯಗಳನ್ನು ಆಡಲಿದೆ. ‘ಆವೃತ್ತಿಯ ಸ್ಮರಣೀಯ ಕ್ಷಣಗಳಿಗೆ ಎದುರು ನೋಡುತ್ತಿದ್ದೇನೆ’ ಎಂದು ನಟ ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಸೀಸನ್ 2ನಲ್ಲಿ ಸಂಗ್ರಹವಾಗಿದ್ದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಲಾಗಿತ್ತು. ಈ ಆವೃತ್ತಿಯಲ್ಲಿ ಸಂಗ್ರಹವಾಗುವ ಹಣವನ್ನು ಯಾವ ಉದ್ದೇಶಕ್ಕೆ ನೀಡಲಾಗುತ್ತದೆ ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ.

ADVERTISEMENT

ಎರಡನೇ ಆವೃತ್ತಿಯಲ್ಲಿ ನಟರಾದ ಸುದೀಪ್‌, ಗಣೇಶ್‌, ಯಶ್‌, ಶಿವರಾಜ್‌ಕುಮಾರ್‌, ಉಪೇಂದ್ರ ಮತ್ತು‍ಪುನೀತ್‌ ರಾಜ್‌ಕುಮಾರ್‌ ನಾಯಕತ್ವದ ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಹಣಾ‍ಹಣಿಯಲ್ಲಿ ಗಣೇಶ್‌ ನೇತೃತ್ವದ ಒಡೆಯರ್‌ ಚಾಜರ್ಸ್‌ ತಂಡ ಗೆಲುವಿನ ನಗೆ ಬೀರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.