ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರನ್ನು ಹಿರಿಯ ನಟಿ ಕಿರಣ್ ಖೇರ್ ’ಕಂಜೂಸ್’ ಎಂದು ಕರೆದಿರುವ ವಿಡಿಯೊ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.
ಸೋನಿ ಟಿ.ವಿ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಕಾರ್ಯಕ್ರಮದಲ್ಲಿ ಶಿಲ್ಪಾ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಅವರನ್ನುಕಿರಣ್ ಕಂಜೂಸ್ ಎಂದಿದ್ದಾರೆ. ಹೀಗೆ ಕರೆಯಲು ನೆನೆಸಿಟ್ಟ ’ಬಾದಾಮಿ’ಯೇ ಕಾರಣ ಎಂಬುದು ಬಹಿರಂಗವಾಗಿದೆ.
‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಸರಣಿ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಕಾರ್ಯಕ್ರಮವಾಗಿದೆ. ಇದರಲ್ಲಿ ನಾಲ್ವರು ಜಡ್ಜ್ಗಳಿದ್ದು ಅವರಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಕಿರಣ್ ಖೇರ್ ಕೂಡ ಸೇರಿದ್ದಾರೆ.
ಕಾರ್ಯಕ್ರಮದ ನಡುವೆ ಶಿಲ್ಪಾ ಮಾತನಾಡುತ್ತ, ನಾನು ತಂದಿರುವ ಬಾದಾಮಿಯನ್ನು ಎಲ್ಲಾ ತಿನ್ನುತ್ತಾರೆ ಎಂದಿದ್ದರು. ಮೊನ್ನೆ 8, ನಿನ್ನೆ 6 ಬಾದಾಮಿ ತಂದಿದ್ದೆ ನನಗೆ ಉಳಿದಿದ್ದು ಕೇವಲ 1 ಮಾತ್ರ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ಮಾತನಾಡಿದ ಕಿರಣ್ , ನಾವು ಮೂರು ಜನ ಇದ್ದೀವಿ, ನೀನು ಕೇವಲ 8, 6 ಬಾದಾಮಿ ತರುತ್ತೀಯಾ ನೀನು ಕಂಜೂಸ್ ಇರುಬೇಕು ಎಂದು ಹೇಳುತ್ತಾರೆ.
ಕಿರಣ್ ಮಾತಿಗೆ ಇಡೀ ಕಾರ್ಯಕ್ರಮದಲ್ಲಿ ಇರುವವರು ನಗುತ್ತಾರೆ. ಈ ಹಾಸ್ಯದ ತುಣುಕನ್ನು ಸೋನಿ ಟಿ.ವಿ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಪತಿ ರಾಜ್ ಕುಂದ್ರಾ ಅವರ ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಿಂದಾಗಿಯೂ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.