ADVERTISEMENT

‘ತ್ರಯ’ದಲ್ಲಿ ಮರ್ಡರ್‌ ಮಿಸ್ಟರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:30 IST
Last Updated 21 ಮಾರ್ಚ್ 2019, 19:30 IST
ಶಂಕರ್ ಮತ್ತು ರಜನಿ
ಶಂಕರ್ ಮತ್ತು ರಜನಿ   

ಕೊಲೆ ಪ್ರಕರಣದ ಸುತ್ತಲಿನ ನಿಗೂಢತೆಯ ಕಥಾಹಂದರದ ಸಿನಿಮಾ ‘ತ್ರಯ’. ಇದರ ಹಾಡುಗಳ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಿತು.

ಇದರ ನಿರ್ದೇಶನ ಕೃಷ್ಣಸಾಯಿ ಅವರದ್ದು. ಇವರು ತಮಿಳಿನವರು. ಭಾಷೆಯ ತೊಂದರೆ ಎದುರಿಸದೆಯೇ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಕೊಂಡಿದೆ ಚಿತ್ರತಂಡ.

‘ತಮಿಳಿನಲ್ಲಿ‌ ಮೂರು ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲಿ ಇದೇ ಮೊದಲ ನಿರ್ದೇಶನ’ ಎಂದು ಮಾತಿಗೆ ಇಳಿದರು ಕೃಷ್ಣಸಾಯಿ.

ADVERTISEMENT

‘ಈ ಚಿತ್ರದಲ್ಲಿ ಹೀಗೆ ಆಗುತ್ತದೆ ಎಂದು ವೀಕ್ಷಕರಿಗೆ ಊಹಿಸಲು ಸುಲಭವಲ್ಲ. ಕನ್ನಡದಲ್ಲಿ ಕೆಲಸ ಮಾಡಿದ್ದು ಖುಷಿ ತಂದಿದೆ. ಚಿತ್ರದ ಹಾಡುಗಳು ಚೆನ್ನಾಗಿ ಬಂದಿವೆ’ ಎಂದರು. ನಟ ಮನ್‌ದೀಪ್ ರಾಯ್ ಅವರು ಈ ಚಿತ್ರದಲ್ಲಿ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಆಗಿ ನಟಿಸಿದ್ದಾರೆ. ‘ಸಿನಿಮಾ ರಂಗದಲ್ಲಿ ನಾನು ಈಗ ನಲವತ್ತನೆಯ ವರ್ಷ ಸವೆಸುತ್ತಿದ್ದೇನೆ. ಎಂಟುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ನನಗೆ ಚಿತ್ರದಲ್ಲಿ ಎಲ್ಲರೂ ಹಿಂಸೆ‌ ಕೊಟ್ಟಿದ್ದಾರೆ! ಮೂರೂ ಜನರಿಗೆ (ಮದನ್, ಅಮೋಘ್ ಮತ್ತು ಶಂಕರ್) ಸಿನಿಮಾದಲ್ಲಿ‌ ನಾನು ಕಪಾಳಕ್ಕೆ ಹೊಡೆದಿದ್ದೇನೆ‌’ ಎಂದರು ನಟಿ ರಜನಿ. ‘ಕಪಾಳಮೋಕ್ಷದ ದೃಶ್ಯಕ್ಕೆ ಐದು ಬಾರಿ ಟೇಕ್‌ ತಗೊಂಡಿದ್ದರು ರಜನಿ’ ಎಂದು ದೂರಿದರು ನಟ ಅಮೋಘ್. ಅಂದಹಾಗೆ, ಅಮೋಘ್ ಅವರದ್ದು ಸಿನಿಮಾದಲ್ಲಿ ಪ್ಲೇಬಾಯ್ ‍ಪಾತ್ರ. ‘ಅಪ್ಪನ ಹತ್ತಿರ ಹೇರಳ ದುಡ್ಡಿದೆ. ಖರ್ಚು ಮಾಡುವುದು ಹೇಗೆ ಎಂಬುದು ಗೊತ್ತಾಗದ ಮಗನ ಪಾತ್ರ ನಂದು’ ಎಂದರು.

ಶಂಕರ್ ಅವರದ್ದೂ ಅಂಥದ್ದೆ ಒಂದು ಪಾತ್ರ. ‘ನನಗೆ ಹೇಳಿಕೊಳ್ಳುವ ಕೆಲಸ ಇಲ್ಲ. ಅಪ್ಪನ ಹತ್ತಿರವಿರುವ ಹಣವನ್ನು ಖರ್ಚು ಮಾಡಲು ಪಾರ್ಟಿ ಮಾಡಿಕೊಂಡಿರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.