ADVERTISEMENT

ಸಿಂಗಪುರದಲ್ಲಿ ಬೆಂಕಿ ಅವಘಡ: ಪವನ್‌ ಕಲ್ಯಾಣ್‌ ಪುತ್ರನಿಗೆ ಗಾಯ

ಪಿಟಿಐ
Published 8 ಏಪ್ರಿಲ್ 2025, 11:10 IST
Last Updated 8 ಏಪ್ರಿಲ್ 2025, 11:10 IST
ಪವನ್‌ ಕಲ್ಯಾಣ್‌
ಪವನ್‌ ಕಲ್ಯಾಣ್‌   

ಸಿಂಗಪುರ/ವಿಜಯವಾಡ: ಸಿಂಗಪುರದ ಕಟ್ಟಡವೊಂದರಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಬಾಲಕಿಯೊಬ್ಬರು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್ ಪುತ್ರ ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ.

ಸಿಂಗಪುರದಲ್ಲಿ ನಡೆದ ಅವಘಡದಲ್ಲಿ ಪವನ್‌ ಕಲ್ಯಾಣ್‌ ಹಿರಿಯ ಪುತ್ರ ಮಾರ್ಕ್ ಶಂಕರ್‌ ಅವರು ಗಾಯಗೊಂಡಿದ್ದಾರೆ ಎಂದು ಜನಸೇನಾ ಪಕ್ಷವು ವಿಜಯವಾಡದಲ್ಲಿ ಪ್ರಕಟಣೆ ನೀಡಿದೆ.

ರಿವರ್‌ ವ್ಯಾಲಿ ರಸ್ತೆಯಲ್ಲಿನ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹತ್ತಿಕೊಂಡಿತು. ಈ ಕಟ್ಟಡದಲ್ಲಿ ಹಲವು ವಾಣಿಜ್ಯ ಕಚೇರಿಗಳು, ಅಡುಗೆ ತರಬೇತಿ ಶಾಲೆ ಮತ್ತು ಮಕ್ಕಳಿಗಾಗಿ ಇರುವ ರೋಬೋಟಿಕ್ಸ್ ಸಂಸ್ಥೆ ಕಾರ್ಯಾಚರಿಸುತ್ತಿದ್ದವು.

ADVERTISEMENT

ಕಟ್ಟಡದಲ್ಲಿದ್ದ 80 ಮಂದಿಯನ್ನು ಹೊರತರಲಾಗಿದ್ದು, ಅವರಲ್ಲಿ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.