ADVERTISEMENT

ಆಂಧ್ರ ನೆರೆ ಪರಿಹಾರ: ₹ 1 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 7:10 IST
Last Updated 8 ಡಿಸೆಂಬರ್ 2021, 7:10 IST
ಪ್ರಭಾಸ್‌
ಪ್ರಭಾಸ್‌   

ಹೈದರಾಬಾದ್‌: ಟಾಲಿವುಡ್‌ನ ಬಾಹುಬಲಿ ನಟ ಪ್ರಭಾಸ್‌ ಅವರು ಆಂಧ್ರದಲ್ಲಿನ ನೆರೆ ಪರಿಹಾರಕ್ಕಾಗಿಸರ್ಕಾರಕ್ಕೆ ₹ 1ಕೋಟಿ ದೇಣಿಗೆ ನೀಡಿದ್ದಾರೆ.

ಇತ್ತೀಚೆಗೆ ಆಂಧ್ರಪ್ರದೇಶದ ರಾಯಲಸೀಮಾ ವಿಭಾಗದಲ್ಲಿ ತಿರುಪತಿ, ನೆಲ್ಲೂರು, ಅನಂತಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರವಾಹದಿಂದ ಅಪಾರ ನಷ್ಟವಾಗಿತ್ತು. ಹಲವರು ಮಳೆಗೆ ಬಲಿಯಾಗಿದ್ದರು.

ಜನರ ಕಷ್ಟಕ್ಕೆ ಮಿಡಿದ ನಟ ಪ್ರಭಾಸ್‌ ₹1 ಕೋಟಿ ದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಇದು ಸಂತ್ರಸ್ತರ ನೆರವಿಗೆ ಬರಲಿದೆ ಎಂದು ಪ್ರಭಾಸ್‌ ಹೇಳಿದ್ದಾರೆ.

ADVERTISEMENT

ಆಂಧ್ರದಲ್ಲಿ ಪ್ರಭಾಸ್‌ ಮಾತ್ರವಲ್ಲದೆ, ಜ್ಯೂನಿಯರ್‌ ಎನ್‌ಟಿಆರ್‌, ಮಹೇಶ್‌ ಬಾಬು ಕೂಡ ₹ 25 ಲಕ್ಷ ದೇಣಿಗೆ ನೀಡಿದ್ದಾರೆ. ನಟ ಚಿರಂಜೀವಿ ಕೂಡ ದೇಣಿಗೆ ನೀಡಿದ್ದು ಅವರ ಮೊತ್ತ ಬಹಿರಂಗವಾಗಿಲ್ಲ.

ಸದ್ಯ ಪ್ರಭಾಸ್‌ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದಿಪುರುಷ್‌ ಶೂಟಿಂಗ್‌ ಮುಕ್ತಾಯವಾಗಿರುವುದರಿಂದ ಸಲಾರ್‌, ಇನ್ನು ಹೆಸರಿಡದ ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಧೆ–ಶ್ಯಾಮಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.