ಬಹು ಭಾಷೆ ತಾರೆ ರಾಶಿ ಖನ್ನಾ ಅವರು ಮದುವೆ ಆಗುವ ಹುಡುಗ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಾರೆ.
ಹೌದು, ನಾನು ಮದುವೆಯಾಗುವ ಹುಡುಗ ಸುಂದರವಾಗಿರದಿದ್ದರೂ ಪರವಾಗಿಲ್ಲ, ಅವನು ಆಧ್ಯಾತ್ಮಿಕ ವ್ಯಕ್ತಿಯಾಗಿರಬೇಕು ಎಂದು ರಾಶಿ ಖನ್ನಾ ಹೇಳಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ 'ನನ್ನ ಮದುವೆಯಾಗುವ ಹುಡುಗನಿಗೆ ಅಧ್ಯಾತ್ಮದಲ್ಲಿ ನಂಬಿಕೆ ಇರಬೇಕು' ಎಂದಿದ್ದಾರೆ.
ನನಗೆ ದೇವರಲ್ಲಿ ನಂಬಿಕೆ ಇರುವುದರಿಂದ ನನ್ನ ಮದುವೆಯಾಗುವ ಹುಡುಗನಿಗೂ ಕೂಡ ಅಧ್ಯಾತ್ಮದಲ್ಲಿ ನಂಬಿಕೆ ಇರಬೇಕು ಎಂದು ಹೇಳಿದ್ದಾರೆ.
ಮದ್ರಾಸ್ ಕೆಫೆ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ್ದ ರಾಶಿ ಖನ್ನಾ ತೆಲುಗು, ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ತೆಲುಗಿನ ಗೋಪಿಚಂದ್ ಹಾಗೂ ನಾಗಚೈತನ್ಯ ಅವರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.