ADVERTISEMENT

ಗ್ರೀನ್‌ ಇಂಡಿಯಾ ಸವಾಲಿನಲ್ಲಿ ಸಸಿ ನೆಟ್ಟ ರಾಮ್‌ಚರಣ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 10:48 IST
Last Updated 8 ನವೆಂಬರ್ 2020, 10:48 IST
‘ಗ್ರೀನ್‌ ಇಂಡಿಯಾʼ ಚಾಲೆಂಜ್‌ನಲ್ಲಿ ಭಾಗವಹಿಸಿದ ರಾಮಚರಣ್‌ (ಟ್ವಿಟರ್‌ ಚಿತ್ರ)
‘ಗ್ರೀನ್‌ ಇಂಡಿಯಾʼ ಚಾಲೆಂಜ್‌ನಲ್ಲಿ ಭಾಗವಹಿಸಿದ ರಾಮಚರಣ್‌ (ಟ್ವಿಟರ್‌ ಚಿತ್ರ)   

ತೆಲುಗು ನಟ ರಾಮಚರಣ್‌‌ ಅವರು ‘ಗ್ರೀನ್‌ ಇಂಡಿಯಾʼ ಸವಾಲಿನಲ್ಲಿ ಭಾಗವಹಿಸಿದ್ದಾರೆ. ಅವರು ಗಿಡ ನೆಟ್ಟುಈ ಅಭಿಯಾನವನ್ನು ಬೆಂಬಲಿಸಿರುವ ಚಿತ್ರ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಸಮಂತಾ ಅಕ್ಕಿನೇನಿ ಅವರು ಕೂಡಾ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಓಹ್‌ ಬೇಬಿ ಚಿತ್ರದ ಬೆಡಗಿ ಸಮಂತಾ ತನ್ನ ತಂದೆಯ ಜೊತೆಗೂಡಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ನಟಿಯರಾದ ಕೀರ್ತಿ ಸುರೇಶ್‌, ರಶ್ಮಿಕಾ ಮಂದಣ್ಣ ಮತ್ತು ಶಿಲ್ಪಾ ರೆಡ್ಡಿ ಕೂಡಾ ಭಾಗವಹಿಸಿದ್ದಾರೆ. ಈ ‘ಗ್ರೀನ್‌ ಇಂಡಿಯಾ ಚಾಲೆಂಜ್‌ಗೆ’ ನಾಮ ನಿರ್ದೇಶನ ನೀಡುವಲ್ಲಿಯೂ ಇವರು ಭಾಗವಹಿಸಿದ್ದಾರೆ. ಕಲಾವಿದರು, ಚಿತ್ರರಂಗದ ಗಣ್ಯರು ಕೂಡಾ ತಮ್ಮ ಆಪ್ತರನ್ನು ನಾಮನಿರ್ದೇಶನ ಮಾಡಿದರು.

ಆರ್‌ಆರ್‌ಆರ್ ಚಿತ್ರದ ನಟ ಪ್ರಭಾಸ್ ಅವರು ಈ ಅಭಿಯಾನದಲ್ಲಿ ಮೂರು ಸಸಿಗಳನ್ನು ನೆಟ್ಟರು. ಎಸ್.ಎಸ್.ರಾಜಮೌಳಿ, ಬಾಲಿವುಡ್ ನಟ ಆಲಿಯಾ ಭಟ್ ಮತ್ತು ಆರ್.ಆರ್.ಆರ್ ಅವರ ತಂಡವನ್ನು ರಾಮಚರಣ್ ಅವರು ನಾಮನಿರ್ದೇಶನ ಮಾಡಿದರು.

ADVERTISEMENT

ತೆಲಂಗಾಣ ಸಂಸದ ಸಂತೋಷ್‌ ಕುಮಾರ್‌ ಅವರು ಈ ಅಭಿಯಾನವನ್ನು ಆರಂಭಿಸಿದ್ದರು. ಪ್ರತಿಯೊಬ್ಬರೂ ಮೂರು ಸಸಿಗಳನ್ನು ನೆಡಬೇಕು ಎಂದು ರಾಮ್‌ಚರಣ್‌ ಕೋರಿದ್ದಾರೆ.

ಇದುವರೆಗೆ ನಾಗಾರ್ಜುನ ಅಕ್ಕಿನೇನಿ, ಸಮಂತಾ, ರಾಶಿ ಖನ್ನಾ ಮತ್ತು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸವಾಲಿನ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.