ವಿವಾದಗಳಿಂದಲೇ ಹೆಚ್ಚು ಜನಪ್ರಿಯವಾದ ತೆಲುಗಿನ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರ ಭಾರಿ ಸಂಚಲನ ಮೂಡಿಸಿದ್ದ‘ಕಮ್ಮಾರಾಜ್ಯಂಲೋ ಕಡಪ ರೆಡ್ಲು’ ಸಿನಿಮಾ ಇಂದು ತೆರೆಕಂಡಿದೆ.
ಹೆಚ್ಚು ಜನ ಸಿನಿಮಾ ವೀಕ್ಷಿಸಲಿ ಎನ್ನುವ ಆಶಯದಲ್ಲಿಆರ್ಜಿವಿ ಉಚಿತ ಸಿನಿಮಾ ಟಿಕೆಟ್ ನೀಡುತ್ತಿದ್ದಾರೆ. ಆದರೆ, ಅದಕ್ಕೊಂದು ಷರತ್ತು ಇದೆ.ಆಂಧ್ರಪ್ರದೇಶದ ರಾಜಕಾರಣಿಗಳಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿರುವ ವರ್ಮಾ, ಈ ದೃಶ್ಯದಲ್ಲಿರುವವರನ್ನು ಗುರುತಿಸಿ ಕಮ್ಮ ರಾಜ್ಯಂ ಕಡಪ ರೆಡ್ಡಿಲು ಸಿನಿಮಾದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ.
92 ಸಾವಿರ ಮಂದಿ ಈ ವಿಡಿಯೊ ವೀಕ್ಷಿಸಿದ್ದು, ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸುಮಾರು 800 ಮಂದಿ ಕಮೆಂಟ್ ಮಾಡಿದ್ದು, ವಿಡಿಯೊದಲ್ಲಿರುವವರನ್ನು ಗುರುತಿಸಿ ಉಚಿತ ಟಿಕೆಟ್ ಪಡೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಅನೇಕರು ವ್ಯಂಗ್ಯದ ಟ್ವೀಟ್ ಮೂಲಕ ಆರ್ಜಿವಿ ಕಾಲೆಳೆದಿದ್ದಾರೆ. 600 ಮಂದಿ ಇದನ್ನು ರಿಟ್ವೀಟ್ ಮಾಡಿದ್ದು, 6200 ಮಂದಿ ಲೈಕ್ ಮಾಡಿದ್ದಾರೆ.
ಆಂಧ್ರ ರಾಜಕೀಯದ ಬಗ್ಗೆ ಆರ್ಜಿವಿ ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ.ಅವರು ದೊಡ್ಡ ಯಶಸ್ಸನ್ನು ಕಂಡು ಸಾಕಷ್ಟು ದಿನಗಳೇ ಆಗಿವೆ. 'ಕಮ್ಮಾ ರಾಜ್ಯಂಲೋ ಕಡಪ ರೆಡ್ಲು' ಚಿತ್ರದಿಂದಾದರೂ ಅವರಿಗೆ ಗೆಲುವು ದಕ್ಕುತ್ತದೆಯೇ ಎನ್ನುವುದನ್ನುಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.