ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಗುರುವಾರ ‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಮೊದಲ ವರ್ಷದ ಪುಣ್ಯತಿಥಿ ನಡೆಯಿತು. ಅಂಬರೀಷ್ ಅವರ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು, ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಅಂಬರೀಷ್ಗೆ ಇಷ್ಟವಾದ ಬಿರಿಯಾನಿ, ತಲೆಕಾಲು ಮಾಂಸ, ಪುಳಿಯೊಗರೆ, ಇಡ್ಲಿ, ಬಾದುಷಾ, ಉಪ್ಪಿಟ್ಟು, ಪೊಂಗಲ್, ಕೀರು, ಕಡುಬು ಸೇರಿದಂತೆ ವಿವಿಧ ಬಗೆಯ ಸಿಹಿತಿನಿಸುಗಳನ್ನು ಇಡಲಾಗಿತ್ತು. ಇದೇ ವೇಳೆ ಅಂಬಿಯನ್ನು ನೆನೆದು ಸುಮಲತಾ ಕಣ್ಣೀರು ಹಾಕಿದರು.
‘ನಾನು ಎಲ್ಲಿಗೆ ಹೋದರು ಅಂಬರೀಷ್ ನೆನಪಾಗುತ್ತಾರೆ. ಪ್ರತಿಕ್ಷಣವೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದ ಅವರು, ವಿಧಾನಸಭಾ ಉಪ ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.