ಬೆಂಗಳೂರು:ಏಪ್ರಿಲ್ 24 ವರನಟ ರಾಜ್ಕುಮಾರ್ ಹುಟ್ಟುಹಬ್ಬ. ಈ ಪ್ರಯುಕ್ತ 'ಅಪ್ಪಾಜಿಯ ನೆನಪು' ಎಂಬ ದನಿ ಸರಣಿಯನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ.
ರಾಜ್ಕುಮಾರ್ ನೆನಪಿನ ಸರಮಾಲೆ ಇದಾಗಿದ್ದು ಅಪ್ಪಾಜಿಯ ನೆನಪು- ಭಾಗ 1 ಏಪ್ರಿಲ್ 12ರಂದು ಅಪ್ಲೋಡ್ ಆಗಿದೆ.ಈ ಭಾಗದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ರಾಜ್ಕುಮಾರ್ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
ಎರಡನೇ ಭಾಗದಲ್ಲಿ ಚಿ.ಉದಯಶಂಕರ್ ಅವರಿಗೆ ಡಾ.ರಾಜ್ ನೀಡಿದ ಸಂದರ್ಶನ ಅಪ್ಲೋಡ್ ಮಾಡಿದ್ದು, ಮೂರನೇ ಭಾಗದಲ್ಲಿ ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 2003ನೇ ಸಾಲಿನ 'ವಾಟಿಕಾ ವರ್ಷದ ಕನ್ನಡಿಗ' ಪ್ರಶಸ್ತಿಯನ್ನು ಪಡೆದು ರಾಜ್ಕುಮಾರ್ ಅವರು ಅಭಿಮಾನಿ ದೇವರುಗಳನ್ನುದ್ದೇಶಿಸಿ ಮಾತನಾಡಿದ ಭಾಷಣವಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.