ADVERTISEMENT

ರಿಷಬ್‌ ನಿರ್ದೇಶನದಲ್ಲಿ ‘ಕಾಂತಾರ’; ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 6:42 IST
Last Updated 28 ಆಗಸ್ಟ್ 2021, 6:42 IST
‘ಕಾಂತಾರ’ ಚಿತ್ರದ ಮುಹೂರ್ತದಲ್ಲಿ ವಿಜಯ್‌ ಕಿರಗಂದೂರು (ಎಡ), ರಿಷಬ್‌ ಶೆಟ್ಟಿ
‘ಕಾಂತಾರ’ ಚಿತ್ರದ ಮುಹೂರ್ತದಲ್ಲಿ ವಿಜಯ್‌ ಕಿರಗಂದೂರು (ಎಡ), ರಿಷಬ್‌ ಶೆಟ್ಟಿ   

ಹೊಂಬಾಳೆ ಫಿಲ್ಮ್ಸ್‌ನ 11ನೇ ಚಿತ್ರ ‘ಕಾಂತಾರ’ಕ್ಕೆ ಇತ್ತೀಚೆಗೆ ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಈ ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿದ್ದಾರೆ. ಸಪ್ತಮಿಗೌಡ ಚಿತ್ರದ ನಾಯಕಿ. ಅಚ್ಯುತಕುಮಾರ್, ಕಿಶೋರ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿದ್ದಾರೆ.

ನಿರ್ಮಾಪಕ ವಿಜಯ ಕಿರಗಂದೂರ್‌ ಅವರ ಸಹೊದರ ಮಂಜುನಾಥ್‌ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು. ಉದ್ಯಮಿ ಉದಯ ಶೆಟ್ಟಿ ಕ್ಯಾಮೆರಾಕ್ಕೆ ಚಾಲನೆ ನೀಡಿದರು.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.ಕೆರಾಡಿ ಮತ್ತು ಹೆಮ್ಮಾಡಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಈ ವರ್ಷಾಂತ್ಯಕ್ಕೆ ಚಿತ್ರ ನಿರ್ಮಾಣ ಮುಕ್ತಾಯಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT