‘ತಮ್ಮನಿಗಾಗಿ ಆಂಧ್ರದ ನಿರ್ದೇಶಕರೊಬ್ಬರ ಒಂದು ಕಥೆ ಕೇಳಿದ್ದೇನೆ. ಆ ಕಥೆಯಲ್ಲಿ ನನ್ನನ್ನೂ ಅಪ್ಪುವನ್ನೂ ನೋಡುತ್ತೀರಿ’– ಹೀಗೆಂದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದವರು ನಟ ಶಿವರಾಜ್ಕುಮಾರ್.
ಕೆಲ ದಿನಗಳ ಹಿಂದಷ್ಟೇ ನಡೆದ ‘ಜೇಮ್ಸ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ಕುಮಾರ್ ಅವರು, ‘ನಾನು, ಅಪ್ಪು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ನಾಲ್ಕೈದು ವರ್ಷದಿಂದ ಯೋಚಿಸುತ್ತಿದ್ದೆವು. ಆದರೆ ಅದು ಆಗಲೇ ಇಲ್ಲ. ಆದರೆ ಈಗ ಕೇಳಿರುವ ಕಥೆಯಲ್ಲಿ ನನ್ನನ್ನೂ ಅಪ್ಪುವನ್ನೂ ನೋಡುತ್ತೀರಿ. ಭಾವನಾತ್ಮಕವಾದ ಕಥೆ ಇದು. ಇದು ನಾನು ಅಪ್ಪುಗೆ ನೀಡುತ್ತಿರುವ ಕೊಡುಗೆ. ಈ ರೀತಿಯ ತಮ್ಮನನ್ನು ಪಡೆಯಲು ಪುಣ್ಯ ಮಾಡಿದ್ದೆವು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.