ಶಿವರಾಜ್ ಕುಮಾರ್- ಧನಂಜಯ ಅಭಿನಯದ ಹೊಸ ಚಿತ್ರವೊಂದರ ಕೆಲಸ ಆರಂಭವಾಗಿದೆ. ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಕೃಷ್ಣಸಾರ್ಥಕ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೃಷ್ಣ ಅವರು ಈ ಮೊದಲು ‘ದಯವಿಟ್ಟು ಗಮನಿಸಿ’ ಚಿತ್ರ ನಿರ್ಮಿಸಿದವರು.
ಕೃಷ್ಣ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ವಿಜಯ ದಶಮಿ ಶುಭಾಶಯಗಳು.. ಸಂಗೀತ ಆರಂಭಗೊಂಡಿದೆʼ ಎಂದು ಬರೆದುಕೊಂಡಿದ್ದಾರೆ.
ಧನಂಜಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮುಂದಿನ 2021ರಲ್ಲಿ ನಮ್ಮ ಶಿವಣ್ಣನೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ. ಪ್ರೊಡಕ್ಷನ್-2 ಎಂಬ ಪೋಸ್ಟರನ್ನೂ ಹಂಚಿಕೊಂಡಿದ್ದಾರೆ.
ಧನಂಜಯ ಅವರು ವಿಜಯ್ ಮಿಲ್ಟನ್ ಅವರೊಂದಿಗೆ ಈ ಹಿಂದೆಯೂ ಕೆಲಸ ಮಾಡಿದ್ದರು. ತಮಿಳು ಚಿತ್ರದಲ್ಲಿಯೂ ಧನಂಜಯ ಪಾತ್ರ ನಿರ್ವಹಿಸುತ್ತಿದ್ದಾರೆ. ಹೊಸ ಚಿತ್ರದ ಕಥೆಯನ್ನು ಮಿಲ್ಟನ್ ಅವರು ಹೇಳಿದಾಗಲೇ ಶಿವರಾಜ್ ಕುಮಾರ್ ಖುಷಿ ಪಟ್ಟು ಒಪ್ಪಿಕೊಂಡರಂತೆ.
ಟಗರು ಮರು ಬಿಡುಗಡೆ: ಅಂದಹಾಗೆ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಕೂಡಾ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಗೋಪಾಲನ್ ಸಿನಿಮಾದಲ್ಲಿ ಈಗಾಗಲೇ ಪ್ರದರ್ಶನ ಕಾಣುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.