ADVERTISEMENT

ಹುಡುಕಿದ್ದು ನಟಿ ರಶ್ಮಿಕಾ ಮನೆ; ಸಿಕ್ಕಿದ್ದು ಮಂದಣ್ಣರ ತೋಟ!

ತೆಲಂಗಾಣದಿಂದ ಬಂದ ಅಭಿಮಾನಿ ಆಕಾಶ್‌ ತ್ರಿಪಾಠಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 7:53 IST
Last Updated 23 ಜೂನ್ 2021, 7:53 IST
ಆಕಾಶ್‌ ತ್ರಿಪಾಠಿ
ಆಕಾಶ್‌ ತ್ರಿಪಾಠಿ   

ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಹೈದರಾಬಾದ್‌ನಿಂದ ಅಭಿಮಾನಿಯೊಬ್ಬ ಬಂದು ಕೊನೆಗೂ ಪೊಲೀಸರಿಂದ ಬುದ್ದಿ ಹೇಳಿಸಿಕೊಂಡು ವಾಪಸಾಗಿದ್ದಾನೆ.

ಈ ಅಭಿಮಾನಿಯ ಹೆಸರು ಆಕಾಶ್‌ ತ್ರಿಪಾಠಿ. ತೆಲಂಗಾಣದಿಂದ ರಶ್ಮಿಕಾ ಅವರನ್ನು ನೋಡಲು ಮೈಸೂರಿನ ರೈಲು ಹತ್ತಿದ. ಮೈಸೂರಿನಿಂದ ಗೂಡ್ಸ್‌ ಆಟೋ ಹತ್ತಿ ವಿರಾಜಪೇಟೆ ಪ್ರದೇಶ ಪ್ರವೇಶಿಸಿದ.

ಗೂಗಲ್‌ ಮ್ಯಾಪ್‌ನಲ್ಲಿ ಹುಡುಕಿದ!

ADVERTISEMENT

ಕೊಡಗಿನಲ್ಲಿ ರಶ್ಮಿಕಾ ಮನೆ ಎಲ್ಲಿ ಎಂದು ಹುಡುಕುವುದು? ಆಕಾಶ್‌ಗೆ ಗೊತ್ತಾಗಲಿಲ್ಲ. ಗೂಗಲ್‌ ಮ್ಯಾಪ್‌ನಲ್ಲಿ ಮಂದಣ್ಣ ಎಂದು ಟೈಪ್ ಮಾಡಿದ. ಮ್ಯಾಪ್‌ ಅದ್ಯಾವುದೋ ದಾರಿ ತೋರಿಸುತ್ತಾ ಹೋಯಿತು. ಹಾಗೆ ತೋರಿಸಿದ ದಾರಿಯಲ್ಲಿ ಹೊರಟವನಿಗೆ ಸಿಕ್ಕಿದ್ದು ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಎಂಬ ಊರು. ಅದು ರಶ್ಮಿಕಾ ಅವರ ತಂದೆ ಮಂದಣ್ಣ ಅವರಿಗೆ ಸೇರಿದ ತೋಟದ ಲೊಕೇಷನ್‌. ರಶ್ಮಿಕಾ ಅವರ ನಿವಾಸ ಇರುವುದು ವಿರಾಜಪೇಟೆಯಲ್ಲಿ.

ತೋಟದ ಬಳಿ ಹೋಗಿ ರಶ್ಮಿಕಾ ಬಗ್ಗೆ ವಿಚಾರಿಸಿದ್ದಾನೆ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.

ಸ್ಥಳಕ್ಕಾಗಮಿಸಿದ ಪೊಲೀಸರು ಆಕಾಶ್‌ನನ್ನು ಕರೆದು ಬುದ್ದಿ ಹೇಳಿದರು. ಕೋವಿಡ್‌ ಹಾವಳಿ ಹೆಚ್ಚಾಗಿರುವ ಕಾರಣ ಹೀಗೆಲ್ಲಾ ಗೊತ್ತು ಗುರಿ ಇಲ್ಲದೆ ತಿರುಗಾಡಬಾರದು. ಅಭಿಮಾನ ಇದ್ದರೆ ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ಭೇಟಿಯಾಗಿ ಮಾತನಾಡಿ. ಈಗ ಅವರೂ ಇಲ್ಲಿಲ್ಲ ಎಂದು ತಿಳಿಹೇಳಿದರು. ಕೊನೆಗೂ ಆಕಾಶ್‌ ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಸದ್ಯ ರಶ್ಮಿಕಾ ಮಂದಣ್ಣ ತಮ್ಮ ಹಿಂದಿ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.