ADVERTISEMENT

ಭಾರತೀಯ ಸಂಸ್ಕೃತಿಯನ್ನು ಕೀಳಾಗಿ ತೋರಿಸಲು ಒಟಿಟಿ ಬಳಸುವಂತಿಲ್ಲ: ಅನುರಾಗ್‌ ಠಾಕೂರ್‌

ಪಿಟಿಐ
Published 18 ಜುಲೈ 2023, 14:37 IST
Last Updated 18 ಜುಲೈ 2023, 14:37 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ನವದೆಹಲಿ: ‘ರಚನಾತ್ಮಕ ಸ್ವಾತಂತ್ರ್ಯ’ದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಮಾಜವನ್ನು ತುಚ್ಛವಾಗಿ ಬಿಂಬಿಸಲು ಸರ್ಕಾರ ಅನುವು ಮಾಡುವುದಿಲ್ಲ ಎಂದು ಒಟಿಟಿ ವೇದಿಕೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಸಿಂಗ್ ಠಾಕೂರ್‌ ಅವರು ಮಂಗಳವಾರ ಹೇಳಿದರು.

ಒಟಿಟಿ ವೇದಿಕೆಗಳ ಪ್ರತಿನಿಧಿಗಳ ಜೊತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಅವರು ಹೇಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಅಪಾಯಕಾರಿ ಪ್ರಚಾರ ಮತ್ತು ಸೈದ್ಧಾಂತಿಕ ಪಕ್ಷಪಾತಕ್ಕಾಗಿ ಒಟಿಟಿ ವೇದಿಕೆಗಳನ್ನು ಸಾಧನಗಳನ್ನಾಗಿ ಬಳಸಬೇಡಿ ಎಂದು ಕೂಡಾ ಠಾಕೂರ್‌ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.