ADVERTISEMENT

ನಂಜನಗೂಡು | ಯಶ್ ದಂಪತಿಯಿಂದ ಹರಕೆ ಮುಡಿ ಸೇವೆ ಸಲ್ಲಿಕೆ

ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆದ ಯಶ್‌ ದಂಪತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 12:30 IST
Last Updated 11 ಮಾರ್ಚ್ 2020, 12:30 IST
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಬುಧವಾರ ತಮ್ಮ ಮಗಳೊಂದಿಗೆ ಭೇಟಿ ನೀಡಿದ ಚಿತ್ರ ನಟ ಯಶ್–ರಾಧಿಕಾ ಪಂಡಿತ್ ದಂಪತಿ
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಬುಧವಾರ ತಮ್ಮ ಮಗಳೊಂದಿಗೆ ಭೇಟಿ ನೀಡಿದ ಚಿತ್ರ ನಟ ಯಶ್–ರಾಧಿಕಾ ಪಂಡಿತ್ ದಂಪತಿ   

ನಂಜನಗೂಡು: ನಗರದ ಐತಿಹಾಸಿಕ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಬುಧವಾರ ಚಿತ್ರನಟ ಯಶ್–ರಾಧಿಕಾ ಪಂಡಿತ್ ದಂಪತಿ ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

ಯಶ್‌ ದಂಪತಿ ತಮ್ಮ ಮಗಳ ಹರಕೆ ಮುಡಿ ಹಾಗೂ ತುಲಾಭಾರ ಸೇವೆ ಸಲ್ಲಿಸಿದರು. ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ದಂಪತಿಗೆ ಸ್ವಾಮಿಯ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಲಾಯಿತು.

ಯಶ್‌ ದಂಪತಿ ನೋಡಲು, ಅವರ ಜೊತೆ ಫೋಟೊ ತೆಗಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಅಂಗರಕ್ಷಕರು ತಡೆಗಟ್ಟಿದರು. ಇದರಿಂದ ಅಸಮಾಧಾನಗೊಂಡ ಹಲವರು ಮಾತಿನ ಚಕಮಕಿ ನಡೆಸಿದರು. ಮಧ್ಯಪ್ರವೇಶಿಸಿದ ಯಶ್, ಅಭಿಮಾನಿಗಳನ್ನು ಸಮಾಧಾನಪಡಿಸಿ, ಸೆಲ್ಫಿ ತೆಗೆಸಿಕೊಂಡರು.

ADVERTISEMENT

ಪೊಲೀಸರು ಜನದಟ್ಟಣೆ ನಿಯಂತ್ರಿಸುವಲ್ಲಿ ಹೈರಾಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.