ADVERTISEMENT

ಯೋಗರಾಜ್ ಭಟ್- ಶಶಾಂಕ್‌ ನಿರ್ಮಾಣದ ಚಿತ್ರಕ್ಕೆ ರಿಷಿ ನಾಯಕ

ಇದು ಪ್ರೊಡ್ಯೂಸರ್ಸ್ ಸ್ಪೇಷಲ್!

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 8:48 IST
Last Updated 27 ಮಾರ್ಚ್ 2019, 8:48 IST
   

‘ಪ್ರೇಮಿಗಳ ದಿನದಂದು ಅದ್ಭುತವಾದ ಮಿಲನವಾಗುತ್ತಿದೆ. ಇದು ನಿಜವಾದ ಲವ್‌ ಸ್ಟೋರಿ. ಇವರಿಬ್ಬರ ಪ್ರಾಡೆಕ್ಟ್‌ ನಾನು’

ನಿರ್ದೇಶಕ ದ್ವಯರು ಹಣ ಹೂಡುತ್ತಿರುವ ಸಿನಿಮಾಗೆ ತಾವು ನಾಯಕನಾಗುತ್ತಿರುವುದರ ಬಗ್ಗೆ ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾ ಖ್ಯಾತಿಯ ನಟ ರಿಷಿ ಕೊಟ್ಟ ವ್ಯಾಖ್ಯಾನವಿದು.

**

ADVERTISEMENT

ನಿರ್ದೇಶಕರಾದ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌ ಅವರು ಒಟ್ಟಿಗೆ ಸೇರಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಈಬಗ್ಗೆಅವರು ಪ್ರೇಮಿಗಳ ದಿನದಂದು ಮಾತನಾಡಿರುವ ವಿಡಿಯೊ ಪ್ರಜಾವಾಣಿಗೆ ಲಭ್ಯವಾಗಿದೆ.

ಕೆಲದಿನಗಳ ಹಿಂದೆ ಯೋಗರಾಜ ಭಟ್ಟರು ಹೇಳಿದ್ದ ಸಾಲೊಂದನ್ನು ಕೇಳಿ ಇಂಪ್ರೆಸ್‌ ಆಗಿದ್ದ ನಟರಿಷಿ, ನಿರ್ದೇಶಕಶಶಾಂಕ್‌ ಅವರಿಗೆ ಕಥೆ ಹೇಳಿದ್ದರು. ಆ ಕಥೆಈಗ ಸಿನಿಮಾ ಆಗುತ್ತಿದೆ. ಈ ಸಿನಿಮಾಗೆ ಹಣ ಹೂಡಲು ಯೋಗರಾಜ್‌ ಸಿನಿಮಾಸ್‌ ಹಾಗೂ ಶಶಾಂಕ್‌ ಸಿನಿಮಾಸ್‌ ಪ್ರೊಡಕ್ಷನ್‌ ಹೌಸ್‌ಗಳು ಒಂದಾಗುತ್ತಿವೆ.ಅಂದಹಾಗೆಬೇರೊಬ್ಬರು ನಿರ್ದೇಶಿಸುತ್ತಿರುವ ಸಿನಿಮಾವೊಂದಕ್ಕೆ ಇವರಿಬ್ಬರು ಹಣ ಹಾಕುತ್ತಿರುವುದೂ ಇದೇ ಮೊದಲು.

ಯೋಗರಾಜ್ ಭಟ್‌

ಹಲವು ಧಾರಾವಾಹಿಗಳಲ್ಲಿ ಹಾಗೂ ಭಟ್ಟರೊಂದಿಗೆ ಕೆಲವು ವರ್ಷಗಳಿಂದ ಕೆಲಸ ಮಾಡಿರುವ ಮೋಹನ್‌ ಸಿಂಗ್‌ ಈ ಸಿನಿಮಾ ಮೂಲಕ ನಿರ್ದೇಶನದಕ್ಯಾಪ್‌ ಧರಿಸುತ್ತಿದ್ದಾರೆ.

ಈ ಹಿಂದೆ ಮಳೆ, ಮೊಲ, ಕರಡಿ ಹಿಡಿದು ಕಥೆ ಹೇಳಿದ್ದ ಭಟ್ರ ಕಣ್ಣೋಟವೀಗ ಸೀರೆ ಕಡೆಗೆ ಹೊರಳಿದೆ.

ಭಟ್ಟರಿಗೆ ಸೀರೆಯ ವ್ಯಾಮೋಹ ಹೊಸತೇನಲ್ಲ. ಪಂಚರಂಗಿ ಚಿತ್ರದಲ್ಲಿ ಉಡಿಸುವೆ ಬೆಳಕಿನ ಸೀರೆಯ... ಎಂಬ ಹಾಡಿನಲ್ಲಿಯೇ ತಮ್ಮ ಸೀರೆ ಪ್ರೇಮವನ್ನು ಮೆರೆದಿದ್ದರು. ಇದೀಗ ಸೀರೆಯನ್ನೇ ಇಟ್ಟುಕೊಂಡ ನವಿರಾದ ಪ್ರೇಮದ ಕಥೆಯನ್ನು ಹರಿಬಿಡಲು ಹೊರಟಿದ್ದಾರೆ.

ಟಗರು ಮಾಸ್ತಿ ಅವರು ಸಂಭಾಷಣೆ ಬರೆಯಲಿರುವುದರಿಂದ ಮಾಸ್‌ ಅಭಿಮಾನಿಗಳಿಗೂ ಭರಪೂರ ರಂಜನೆ ಸಿಗುವ ನಿರೀಕ್ಷೆಯಿದೆ.‌

‘ಪ್ರೇಮಿಗಳ ದಿನದಂದು ಜೊತೆಯಾಗಿದ್ದೇವೆ. ಒಟ್ಟಿಗೆ ಸಿನಿಮಾ ಮಾಡುವ ಆಲೋಚನೆ ಬಹಳ ದಿನಗಳಿಂದಲೂ ಇತ್ತು. ಆದರೆ ಆ ಯೋಜನೆ ಇಂದು(ಪ್ರೇಮಿಗಳ ದಿನದಂದು)ಕೈಗೂಡಿದೆ’ಎಂದು ಪಡ್ಡೆ ಹುಡುಗರ ಎದೆ ಮೇಲೆ ಮಳೆ ಸುರಿಸಿ, ಗಾಳಿಪಟ ಹಾರಿಸಿದ್ದ ನಿರ್ದೇಶಕ ಯೋಗರಾಜ ಭಟ್‌ ಅವರು ಹೇಳಿಕೊಂಡಿದ್ದಾರೆ.

‘ಇಲ್ಲಿಯವರೆಗೆ ಮಲ್ಟಿ ಸ್ಟಾರರ್‌ ಸಿನಿಮಾಗಳನ್ನು ನೋಡಿದ್ದೇವೆ. ಈ ಬಾರಿ ನಿರ್ದೇಶಕರುಗಳು ಸೇರಿ ಸಿನಿಮಾ ಮಾಡಲು ಹೊರಟಿದ್ದೇವೆ. ಒಂದೊಳ್ಳೆ ಸಿನಿಮಾ ಮಾಡುವ ನಂಬಿಕೆ ಇದೆ’ ಎಂದು ಶಶಾಂಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಯೋಗರಾಜ್‌ ಭಟ್ಟರು ಹಾಗೂ ಶಶಾಂಕ್‌ ಅವರು ನಿರ್ಮಿಸುತ್ತಿರುವ ಸಿನಿಮಾವನ್ನು ನಾನು ನಿರ್ದೇಶಿಸುತ್ತಿದ್ದೇನೆ ಎನ್ನುವುದೇ ಹೆಮ್ಮೆಯ ವಿಷಯ. ಈ ಸಿನಿಮಾ ಮೂಲಕ ನನ್ನನ್ನು ನಾನು ಪ್ರೂವ್‌ ಮಾಡಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ’ಎಂದು ಸಿಂಗ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಶಶಾಂಕ್‌

ರಿಷಿ ನಟಿಸಿರುವ ಬಹು ನಿರೀಕ್ಷಿತ ಕವಲುದಾರಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಬಳಿಕ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.ನಾಯಕಿ ಹಾಗೂ ಉಳಿದ ಪಾತ್ರಗಳ ಆಯ್ಕೆಯೂ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.