ADVERTISEMENT

‘ಭವ ಎನಗೆ ಹಿಂಗಿತು’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:00 IST
Last Updated 12 ಫೆಬ್ರುವರಿ 2019, 20:00 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಕರಣಂ ಪವನ್‌ ಪ್ರಸಾದ್ ರಚಿಸಿರುವ ’ಭವ ಎನಗೆ ಹಿಂಗಿತು‘ ಹೊಸ ನಾಟಕ ಇದೇ 16ರಂದು ಪ್ರದರ್ಶನಗೊಳ್ಳಲಿದೆ.

ಹನುಮಂತನಗರದ ಕೆ.ಎಚ್‌.ಕಲಾಸೌಧದಲ್ಲಿ ಸಂಜೆ 4.30 ಹಾಗೂ 7 ಗಂಟೆಗೆ ಎರಡು ಪ್ರದರ್ಶನ ನಡೆಯಲಿದೆ. ಪ್ರವರ ಆರ್ಟ್ಸ್‌ ಸ್ಟುಡಿಯೋ ಈ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ಒಬ್ಬ ಪ್ರಸಿದ್ಧ ಬರಹಗಾರ ಪ್ರಭು ಹಾಗೂ ಆತನ ಮಗ ಚಿರಂತನ ಬದುಕಿನ ಸುತ್ತ ಹೆಣೆದಿರುವ ಕಥೆಯೇ ಭವ ಎನಗೆ ಹಿಂಗಿತು ನಾಟಕವಾಗಿದೆ. ಪ್ರಭುವಿನ ದಿನನಿತ್ಯದ ಬದುಕು, ಆತನ ಮಾನಸಿಕ ತುಮುಲಗಳು ಕಥೆಯ ಮುಖ್ಯ ಹಂದರ.

ADVERTISEMENT

ಕೆಲಸದಾಕೆ ಸರಳ ಮತ್ತು ಆತನ ಗಂಡ ರಾಜು ಈ ಕಥೆಗೆ ಕುತೂಹಲಕಾರಿ ತಿರುವುಗಳನ್ನು ನೀಡುತ್ತಾರೆ. ಸಂಭಾಷಣೆಯ ಜೊತೆಗಿನ ಅಭಿನಯ ಹಾಗೂ ರೋಚಕ ಕಥೆಯಿಂದ ನಾಟಕ ಕುತೂಹಲಕಾರಿ.

ನಿರ್ದೇಶನ–ಹನು ರಾಮಸಂಜೀವ, ರಚನೆ–ಕರಣಂ ಪವನ್‌ ಪ್ರಸಾದ್, ಸಂಗೀತ–ಪ್ರಸನ್ನ ಕುಮಾರ್‌, ಬೆಳಕು–ಮಂಜು ನಾರಾಯಣ್‌, ಛಾಯಾಗ್ರಹಣ–ಶ್ರೀನಿವಾಸ್ ಜೋಷಿ, ರಂಗದ ಮೇಲೆ–ಹನು ರಾಮಸಂಜೀವ, ರಾಜ್ ಆರಾಧ್ಯ, ಯಶ್ವಂತ್‌ ಸಾಗರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.