ADVERTISEMENT

ಕಿರುತೆರೆಯಲ್ಲಿ ಅಮೃತವರ್ಷಿಣಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬಡ ಕುಟುಂಬದಿಂದ ಬಂದ  ಮುಗ್ಧ, ವಿನಮ್ರ ಹುಡುಗಿಯೊಬ್ಬಳು ಶ್ರೀಮಂತ ಹುಡುಗನನ್ನು ಮದುವೆಯಾದಾಗ ಅವಳ ಬದುಕಿನಲ್ಲಿ ಉಂಟಾಗುವ ಪಲ್ಲಟಗಳ ಕಥೆಯ `ಅಮೃತವರ್ಷಿಣಿ~ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
 
ಈ ನೂತನ ಧಾರಾವಾಹಿ ಇದೇ ಮಾರ್ಚ್ 19ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

`ಕೃಷ್ಣ ರುಕ್ಮಿಣಿ~ ಯಶಸ್ವಿ ಧಾರಾವಾಹಿಯ ನಿರ್ಮಾಪಕ ರವಿ ಗರಣಿ ಅವರ ಆರ್.ಜಿ. ಮೀಡಿಯಾ ಸ್ಟಪ್ ಸಂಸ್ಥೆಯ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿಬರಲಿದೆ.

`ಗುಣಾತ್ಮಕ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ. ಧಾರಾವಾಹಿಯನ್ನು ಅದ್ದೂರಿಯಾಗಿ ಚಿತ್ರಿಸಿದ್ದೇವೆ~ ಎಂದು ನಿರ್ಮಾಪಕ ರವಿ ಗರಣಿ ತಿಳಿಸಿದ್ದಾರೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.