ಅಶ್ವಿನಿ ಗೌಡ, ಕಿಚ್ಚ ಸುದೀಪ್, ಜಾಹ್ನವಿ
ಚಿತ್ರ: ಇನ್ಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12 ಆರಂಭವಾಗಿ ಮೂರು ವಾರ ಕಳೆದಿದೆ. 3ನೇ ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆಗೆ ಆಗಮಿಸುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು, ‘ನಿಮ್ಮ ಹೇಳಿಕೆಗಳನ್ನು ಹೇಳುತ್ತಾ ಹೋಗುತ್ತೀನಿ. ನಿನ್ನ ನೋಡಿದರೇ ಎಲ್ಲಿಂದ ಬಂದಿರುವೆ ಎಂದು ಗೊತ್ತಾಗುತ್ತೆ, ಕಾರ್ಟೂನ್ ಅಂತೀರಾ. ಸುಧಿ ನಿಮ್ಮನ್ನ ಯಮ್ಮಾ ಅಂತ ಕರೆದರೇ, ಹಾಗೇ ಕರಿಬೇಡ ನನಗೊಂದು ಹೆಸರಿದೆ ಅಂತೀರಿ. ಆದರೆ ನೀವು ಅವಿವೇಕಿ (ಈಡಿಯಟ್) ಎನ್ನುತ್ತೀರಿ. ತಮಾಷೆ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಕೊಲೆ ಮಾಡುತ್ತಾ ಹೋದರೆ ನಿಮಗೆ ಒಪ್ಪಿಗೆ ಇದ್ಯಾ? ಒಬ್ಬನ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬನ ಆಸ್ತಿ ಆಟ ಸಾಮಾನ್ ಆಗಬಾರದು. ಯಾರ ಅಪ್ಪನ ಆಸ್ತಿನೂ ಅಲ್ಲ’ ಎಂದು ವೇದಿಕೆ ಮೇಲೆ ಕಿಚ್ಚ ಸುದೀಪ್ ಗುಡುಗಿದ್ದಾರೆ.
ಕಿಚ್ಚ ಸುದೀಪ್ ಕೋಪಕ್ಕೆ ಕಾರಣವೇನು?
ಅಶ್ವಿನಿ ಗೌಡ ಹಾಗೂ ಜಾಹ್ನವಿ ತಮಾಷೆಗಾಗಿ ರಕ್ಷಿತಾ ರಾರಾ ಎಂದು ನಾಗವಲ್ಲಿ ರೀತಿ ಡ್ಯಾನ್ಸ್ ಮಾಡಿದ್ದಳು ಎಂದು ಮನೆಮಂದಿ ಮುಂದೆ ಹೇಳಿದ್ದರು. ಇದಾದ ಬಳಿಕ ನಿನ್ನೆಯ (ಶುಕ್ರವಾರ) ಸಂಚಿಕೆಯಲ್ಲಿ ರಕ್ಷಿತಾ ಜೊತೆಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿನ ಬರದಲ್ಲಿ ಅಶ್ವಿನಿ, ನಿನ್ನ ಬಟ್ಟೆ ನೋಡಿದರೆ ಗೊತ್ತಾಗುತ್ತೆ ಎಲ್ಲಿಂದ ಬಂದಿದ್ದೀಯಾ ಅಂತ, ಅವಿವೇಕಿ, ಮುಚ್ಚಿಕೊಂಡು ಮಲಗಿಕೋ ಎಂದು ಕೂಗಾಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಇಡೀ ವಾರದ ಬೆಳವಣಿಗೆಯನ್ನು ಗಮನಿಸಿದ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.