ಬೆಂಗಳೂರು: ಬಿಗ್ ಬಾಸ್ ಏಳನೇ ವಾರದಲ್ಲಿ ಕಳಪೆ ಪಟ್ಟ ಪ್ರತಾಪ್ಗೆ ದೊರಕಿದೆ. ಪ್ರತಾಪ್ ನಾಯಕನಾಗಿದ್ದ ‘ಮಣ್ಣಿನ ಮಕ್ಕಳು’ ತಂಡ ಈ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲನ್ನು ಕಂಡಿತ್ತು.
ವಾರದ ಕಳಪೆ ಹಾಗೂ ಉತ್ತಮ ಪಟ್ಟ ನೀಡುವ ವೇಳೆ ಮನೆಯ ಸದಸ್ಯರು ಪ್ರತಾಪ್ ಹೆಸರು ಸೂಚಿಸಿದ್ದಾರೆ.
‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಸರ ತಂದಿದೆ’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ನನ್ನು ಟಾಸ್ಕ್ನಿಂದ ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಸಿಟ್ಟಿನಲ್ಲಿಯೇ ಆಡುತ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ.
ವರ್ತೂರು, ಸ್ನೇಹಿತ್ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ. ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆ ತೊಟ್ಟು ಜೈಲಿನೊಳಗೆ ಹೋಗಿದ್ದಾರೆ. ಆದರೆ ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಬೇಸರ ಹೊರಹಾಕಿದ್ದಾರೆ.
ಮನದಾಳ ಬಿಚ್ಚಿಟ್ಟ ಪ್ರತಾಪ್
ಜಿಯೊ ಸಿನಿಮಾದಲ್ಲಿ 24ಗಂಟೆಯೂ ನೇರಪ್ರಸಾರವಾಗುವ ಬಿಗ್ ಬಾಸ್ 10 ಕಾರ್ಯಕ್ರಮದಲ್ಲಿ ಪ್ರತಾಪ್ ಜೀವನದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ‘ಜೀವನದಲ್ಲಿ ಬಾಯಿತಪ್ಪಿ ಆಡಿದ ಮಾತಿಗೆ ಬಹಳಷ್ಟು ಕೆಟ್ಟ ಮಾತುಗಳನ್ನು ಕೇಳಿದ್ದೀನಿ. ಮಾನಸಿಕ ಅಸ್ವಸ್ಥ ಎಂದು ಬರೆದುಕೊಡು ಎಂದು ಹಿಂಸೆ ನೀಡುತ್ತಿದ್ದರು’ ಎಂದು ತಮ್ಮ ಹಳೆಯ ದಿನಗಳನ್ನು ನೆನೆಪಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.