ಬೆಂಗಳೂರು:ತುಮಕೂರು ಜಿಲ್ಲೆ ಪಾವಗಡದ ಮಂಜುನಾಥ್ 10ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಕಲರ್ಸ್ ಕನ್ನಡದ ಮಜಾಭಾರತದ ಮೂಲಕ ಹಾಸ್ಯನಟನಾಗಿ ಪರಿಚಯ. ಮಜಾಭಾರತದಲ್ಲಿ ‘ಲ್ಯಾಗ್ ಮಂಜ‘ ಎಂದೇ ಖ್ಯಾತಿ ಪಡೆದಿದ್ದಾರೆ.
'ಮಜಾಭಾರತ ಎಂಬ ಹಾಸ್ಯ ಕಾರ್ಯಕ್ರಮ ತನ್ನ ಜೀವನವನ್ನೇ ಬದಲಿಸಿದೆ. ನಿರ್ದೇಶನ ಮಾಡುವಷ್ಟರ ಮಟ್ಟಿಗೆ ಮಜಾಭಾರತ ನನ್ನನ್ನು ಬೆಳೆಸಿದೆ,' ಎಂದು ಅವರು ಹೇಳಿದರು.
ಪಾವಗಡದಿಂದ ನೀನಾಸಂವರೆಗೂ ಸೈಕಲ್ ಹೊಡೆದ ಮಂಜುನಾಥ್, ಮಜಾಭಾರತದ – ಕಾರ್ಯಕ್ರಮದ ಮೂಲಕ ನಾಡಿನ ಕನ್ನಡಿಗರ ಮನೆ ಮನಕ್ಕೆ ತಲುಪಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.