ADVERTISEMENT

ತೆಲುಗಿನ ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 13:13 IST
Last Updated 9 ಸೆಪ್ಟೆಂಬರ್ 2020, 13:13 IST
ಶ್ರಾವಣಿ ಕೊಂಡಪಲ್ಲಿ
ಶ್ರಾವಣಿ ಕೊಂಡಪಲ್ಲಿ   

ಹೈದರಾಬಾದ್‌: ತೆಲುಗಿನ ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಮಂಗಳವಾರ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಹಲವಾರು ಟಿವಿ ಧಾರಾವಾಹಿಗಳಲ್ಲಿ ಶ್ರಾವಣಿ ನಟಿಸಿದ್ದಾರೆ. ಸದ್ಯ ಅವರು ಮೌನ, ಮನಸ್ಸು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.

ಘಟನೆ ಸಂಬಂಧ ಶ್ರಾಮಣಿ ಪೋಷಕರು ದೇವರಾಜ್‌ ಎಂಬ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ. ದೇವರಾಜ್‌ ಕಿರುಕುಳವೇ ಶ್ರಾವಣಿ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ADVERTISEMENT

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ಶ್ರಾವಣಿಗೆ ದೇವರಾಜ್‌ ಟಿಕ್‌ಟಾಕ್‌ ಮೂಲಕ ಪರಿಚಯವಾಗಿದ್ದರು. ಈ ಹಿಂದೆ ಕೂಡ ದೇವರಾಜ್‌ ಶ್ರಾವಣಿಗೆ ಕಿರುಕುಳ ನೀಡಿದ್ದರು. ಈ ಸಂಬಂಧ ಶ್ರಾವಣಿ ಪೋಷಕರು ದೂರು ನೀಡಿದ್ದರು. ದೇವರಾಜ್‌ನನ್ನು ಬಂಧಿಸಿದ್ದ ಪೊಲೀಸರು ಬುದ್ದಿ ಹೇಳಿದ್ದರು ಎಂದು ಶ್ರಾವಣಿ ಸಹೋದರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.