ADVERTISEMENT

‘ವೀಕೆಂಡ್ ವಿತ್ ರಮೇಶ್’ನಲ್ಲಿ ಡಾ. ವೀರೇಂದ್ರ ಹೆಗ್ಗಡೆ, ನಟ ಗಣೇಶ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
WWR
WWR   

ಜಿ ಕನ್ನಡ ವಾಹಿನಿಯ ಪ್ರಸಿದ್ಧರಿಯಾಲಿಟಿ ಶೋ ‘ವೀಕೆಂಡ್ ವಿತ್ ರಮೇಶ್’ ಮರು ಪ್ರಸಾರವಾಗುತ್ತಿದ್ದು, ಇದೇ ಶನಿವಾರ ಮತ್ತು ಭಾನುವಾರ ಕ್ರಮವಾಗಿಡಾ. ವೀರೇಂದ್ರ ಹೆಗ್ಗಡೆ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್‌ ಅವರ ಸಂಚಿಕೆಗಳು ಪ್ರಸಾರವಾಗಲಿವೆ.

‘ವೀಕೆಂಡ್ ವಿತ್ ರಮೇಶ್’ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ಅವರ ಬದುಕಿನ ಸ್ಫೂರ್ತಿದಾಯಕ ಕಥೆ ಈ ಸಂಚಿಕೆಯಲ್ಲಿದೆ. ಅವರ ಮಗಳು ಶ್ರದ್ಧಾ ತನ್ನ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದರು. ‘ಅಪ್ಪ ಎಂದರೆ ನನಗೆ ಅವರು ಹೇಳುತ್ತಿದ್ದ ಕಥೆಗಳು ನೆನಪಾಗುತ್ತವೆ. ಅವರು ಕಲ್ಪಿಸಿಕೊಂಡು ಹೇಳುವ ಕಥೆಗಳು ಖುಷಿಕೊಡುತ್ತಿದ್ದವು. ಯಾಕಂದ್ರೆ ಅದರಲ್ಲಿ ನಾನೇ ಹೀರೋಯಿನ್!’ ಎಂದಿದ್ದರು ಶ್ರದ್ಧಾ.

‘ಕಾಮಿಡಿ ಟೈಮ್’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡ ನಟ ಗಣೇಶ್, ನಂತರ ಹೀರೊ ಆಗಿ, ‘ಗೋಲ್ಡನ್ ಸ್ಟಾರ್’ ಆಗಿ ಬೆಳೆದ ರೀತಿಯೇ ಅದ್ಭುತ.ಗಣೇಶ್ ಹೀರೊ ಆದ ರೋಮಾಂಚಕ ಕಥೆಯನ್ನು ಇದೇ ಭಾನುವಾರ ‘ವಿಕೆಂಡ್ ವಿತ್ ರಮೇಶ್’ ಶೋನ ಮರುಪ್ರಸಾರದಲ್ಲಿ ನೋಡಬಹುದು ಎಂದು ವಾಹಿನಿ ತಿಳಿಸಿದೆ.

ADVERTISEMENT

ಮೇ 2, ಶನಿವಾರ ಮಧ್ಯಾಹ್ನ 1 ಗಂಟೆಗೆ ಡಾ. ಹೆಗ್ಗಡೆ ಅವರ ಸಂಚಿಕೆ, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಚಿಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.