ಹುಬ್ಬಳ್ಳಿ: ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ನಡೆಯುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಮಧುಮೇಹ ಸಮಸ್ಯೆ ಕುರಿತ ನಿಮ್ಮ ಸಮಸ್ಯೆ, ಸಂದೇಹ, ಪ್ರಶ್ನೆಗಳಿಗೆ ಮಧುಮೇಹ ಮತ್ತು ಹೃದ್ರೋಗ ತಜ್ಞ ಡಾ.ಜೆ.ಬಿ.ಸತ್ತೂರ ಉತ್ತರಿಸಲಿದ್ದಾರೆ.
ಮಧುಮೇಹ ಯಾವ ವಯಸ್ಸಿನಲ್ಲಿ ಬರಬಹುದು? ಬರದಂತೆ ತಡೆಯುವುದು ಹೇಗೆ? ಇನ್ಸುಲಿನ್ ಅನಿವಾರ್ಯವೇ? ಮಧುಮೇಹ ನಿರ್ವಹಣೆ ಹೇಗೆ? ಹೃದಯಕ್ಕೂ ತೊಂದರೆಯಾಗುವ ಸಾಧ್ಯತೆಗಳಿವೆಯೇ? ಪದೇಪದೇ ಮೂತ್ರ, ಕಣ್ಣಿನ ಸಮಸ್ಯೆ, ತುರಿಕೆ ಇತ್ಯಾದಿ ಇತ್ಯಾದಿ... ನಿಮ್ಮ ಮನದ ಹತ್ತಾರು ಪ್ರಶ್ನೆಗಳಿಗೆ ಸತ್ತೂರ ಡಾಕ್ಟರ್ ಉತ್ತರಿಸಲಿದ್ದಾರೆ.
ಇಂದು (ಬುಧವಾರ, ನವೆಂಬರ್ 13) ಬೆಳಿಗ್ಗೆ 10ರಿಂದ 11.30ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಕರೆ ಮಾಡಬೇಕಾದ ಸಂಖ್ಯೆ 1800 599 6061.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.