ADVERTISEMENT

ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಅಕ್ಟೋಬರ್ 2025, 23:15 IST
Last Updated 5 ಅಕ್ಟೋಬರ್ 2025, 23:15 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೀವು ಆಡಿದ ಮಾತುಗಳು ನಿಮಗೆ ಮುಳ್ಳಾಗಲಿವೆ, ಆದ್ದರಿಂದ ಮಾತಿನಲ್ಲಿ ಹಿಡಿತವಿರಲಿ. ದಾಖಲೆ ಪತ್ರಗಳನ್ನು ಬರೆಸುವಾಗ ಸಂಖ್ಯೆ ಅಥವಾ ವಾಕ್ಯಗಳ ಬಗ್ಗೆ ಹೆಚ್ಚಿನ ಗಮನವಹಿಸಿ ಮತ್ತು ಪರಿಣತರ ಸಲಹೆಯನ್ನು ಕೇಳಿ.
  • ವೃಷಭ
  • ವೈದ್ಯರು ಅದರಲ್ಲೂ ನರ ರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ಬೇಜವಾಬ್ದಾರಿತನದಿಂದ ಪಾಪ ಸಂಗ್ರಹಣೆಯಾಗುವುದು. ಪ್ರತಿ ವರ್ಷ ಮಾಡುತ್ತಿದ್ದ ಧಾರ್ಮಿಕ ಕೆಲಸವನ್ನು ಮುಂದುವರಿಸುವ ಬಗ್ಗೆ ತೀರ್ಮಾನಿಸಿ.
  • ಮಿಥುನ
  • ಉದ್ವೇಗ ಹಾಗೂ ಕೆಲ ವೈಮನಸ್ಸುಗಳು ದೂರಾವಾಗುವುದು. ಹಣಕಾಸಿನ ಕೊರತೆ ಅಷ್ಟಾಗಿ ಕಾಡದು. ಮಗನ ಕೆಲಸ ನೆರವೇರಿದ ಕಾರಣಕ್ಕೆ ಹೇಳಿಕೊಂಡ ಹರಕೆಯನ್ನು ಪೂರ್ಣಗೊಳಿಸುವ ಬಗ್ಗೆ ಮಗನಲ್ಲಿ ಪ್ರಸ್ತಾಪಿಸಿ.
  • ಕರ್ಕಾಟಕ
  • ಕುಟುಂಬದ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವಿರಿ. ಸ್ಥಾನ ಬದಲಾವಣೆಯಿಂದ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವುದು. ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಸುಸಮಯವಾಗಿದೆ.
  • ಸಿಂಹ
  • ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆಯುವ ಕಾಲವಿದು. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಂತೆ ಆಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
  • ಕನ್ಯಾ
  • ಸೋಮಾರಿತನವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸ ಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗುವುದಿಲ್ಲ. ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವಿರಿ. ಭೂ ವ್ಯವಹಾರದಲ್ಲಿ ವಂಚನೆಯಾಗುವ ಸಾಧ್ಯತೆಗಳಿದೆ.
  • ತುಲಾ
  • ಉದ್ಯೋಗದಲ್ಲಿ ತೊಂದರೆಗಳಿರುವುದಿಲ್ಲ. ವ್ಯವಹಾರ ನಿಮಿತ್ತ ದ ಪ್ರಯಾಣದಲ್ಲಿ ನಯವಂಚಕರ ಬಗ್ಗೆ ಎಚ್ಚರವಹಿಸಿ. ಪಿತ್ತ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು. ಜಗನ್ಮಾತೆಯನ್ನು ಆರಾಧಿಸಿ.
  • ವೃಶ್ಚಿಕ
  • ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ. ಕೆಲಸಗಳು ಸರಾಗವಾಗಿ ನೆರವೇರುವುದು. ನಿಮ್ಮ ಸಮಯೋಚಿತವಾದ ಬುದ್ಧಿಶಕ್ತಿಯು ಸಂಕಟಗಳನ್ನು ದೂರ ಮಾಡಲಿದೆ.
  • ಧನು
  • ಮನೆಯಲ್ಲಿ ಶಾಂತಿ ಹೋಮ ನಡೆಸಲು ಖರ್ಚಿನ ವಿಷಯ ಚರ್ಚೆಗೆ ಬರುವುದು. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಮನಸ್ಸಿನ ಚಂಚಲತೆಯಿಂದಾಗಿ ಕೆಲಸದಲ್ಲಿ ವಿಫಲರಾಗುವ ಸನ್ನಿವೇಶಗಳಿರುವುದು.
  • ಮಕರ
  • ದುರ್ಜನರ ಸಹವಾಸದಿಂದ ಅಪವಾದಗಳಿಗೆ ಒಳಗಾಗುವಿರಿ, ಆದ್ದರಿಂದ ಸಜ್ಜನರ ಸಹವಾಸವನ್ನು ಮಾಡಿರಿ. ಉದ್ಯೋಗಿಗಳಿಗೆ ವೃತ್ತಿಯು ತಾತ್ಕಾಲಿಕ ಸಮಾಧಾನವನ್ನು ತಂದರೂ ಬದಲಾವಣೆಗೆ ಅವಕಾಶ ಇರುತ್ತದೆ.
  • ಕುಂಭ
  • ವ್ಯಾವಹಾರಿಕ ಸಂಬಂಧಗಳು ವಿಸ್ತಾರಗೊಳ್ಳಲಿವೆ. ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜೊತೆಯಲ್ಲಿ ಅಧಿಕ ಲಾಭವೂ ದೊರಕಲಿದೆ. ನವಗ್ರಹ ಪೂಜೆಯಿಂದ ಶುಭ ವಾರ್ತೆ ಪಡೆಯುವಿರಿ.
  • ಮೀನ
  • ಸಾಲ ಮರುಪಾವತಿ ಬಗ್ಗೆ ಚಿಂತೆ ಉಂಟಾಗುತ್ತದೆ. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವದ ಅವಕಾಶ ಲಭ್ಯವಾಗುವುದು. ಸಂಜೆಯ ಸಮಯದಲ್ಲಿ ಬೆಲೆ ಬಾಳುವ ವಸ್ತು ಕಾಣೆಯಾಗುವ ಸಂಭವವಿದೆ, ಜಾಗ್ರತೆವಹಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.