ಆಲೋಚಿಸಿದಂತೆ ಕೆಲಸ ನಡೆಯದೇ ಸೋಲು, ಹಿನ್ನಡೆ ಎಂಬಂತೆ ಮನಸ್ಸಿಗೆ ಬರಬಹುದು. ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಸರಿಯಾದ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುತ್ತವೆ.
ಕರ್ಕಾಟಕ
ವೃತ್ತಿ ಬದುಕಿನಲ್ಲಿ ಅಭಿಪ್ರಾಯಗಳಿಗೆ ವಿರೋಧ ಬರಲಿದೆ. ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆ ನೀಡಬೇಡಿ. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠುರವಾಗಿ ವರ್ತಿಸಬೇಕಾಗುವುದು.
ಸಿಂಹ
ಪ್ರಕೃತಿ ವಿಕೋಪದ ಕಾರಣದಿಂದ ಮನೆಯಲ್ಲಿ ಸಣ್ಣ-ಪುಟ್ಟ ರಿಪೇರಿ ಕೆಲಸ ಮಾಡಿಸಬೇಕಾದ ಅನಿವಾರ್ಯವಾಗುವುದು. ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಲಿವೆ.
ಕನ್ಯಾ
ನಂಬಿರುವ ವ್ಯಕ್ತಿಗಳ ಬಗ್ಗೆ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆನಿಸಿದರೂ ಹಾಗೆ ಮಾಡದಿರಿ. ಜಾಣತನದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.
ತುಲಾ
ಧಾರ್ಮಿಕ ನಾಯಕರಿಗೆ ಮರೆಯಲಾಗದ ಘಟನೆಯೊಂದು ಸುತ್ತಮುತ್ತಲಿನಲ್ಲಿ ನಡೆಯುವುದು. ಅವಲಂಬಿಸಿರುವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ. ಸಂತಾನಾಪೇಕ್ಷಿಗಳು ಫಲವನ್ನು ಪಡೆಯುವಿರಿ.
ವೃಶ್ಚಿಕ
ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಅಭಿವೃದ್ಧಿಯ ಬದುಕಿಗೆ ಬೇಕಾದ ಅವಕಾಶಗಳು ಸಿಗಲಿವೆ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನವನ್ನು ಕಂಡುಕೊಳ್ಳಬಹುದು.
ಧನು
ನಿಮ್ಮಿಂದ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸಿಕ್ಕಿ ಮನಸ್ಸಿಗೆ ನೆಮ್ಮದಿಯಾಗಲಿದೆ. ಪ್ರತಿ ಹೆಜ್ಜೆಯು ಆತ್ಮಸಾಕ್ಷಿಗೆ ಒಪ್ಪುವಂತೆ ಇರಲಿ. ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು.
ಮಕರ
ವ್ಯವಹಾರದಲ್ಲಿ ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ಸಾಮರ್ಥ್ಯ ತೋರಿಸುವ ಬಗ್ಗೆ ನಿಮ್ಮ ಶ್ರಮವಿರಲಿ. ಸಹಾಯ ಹಸ್ತಗಳ ಮುಖಾಂತರವಾಗಿ ಅಪೂರ್ಣ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.
ಕುಂಭ
ವರಮಾನವನ್ನು ಪಡೆಯುವ ಮುಖ್ಯ ಆಕಾಂಕ್ಷೆಯಿಂದ ಸುಲಭದ ಮತ್ತು ಹತ್ತಿರದ ಕೆಲಸ ತಿರಸ್ಕರಿಸಬೇಡಿ. ವ್ಯಾಪಾರ ಮಾರುಕಟ್ಟೆ ವಿಸ್ತರಿಸಲು ಬೇಕಾದ ತಯಾರಿ ಮಾಡಿಕೊಳ್ಳಿರಿ. ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
ಮೀನ
ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿ ಸುವುದು ಸಮಂಜಸವೆಂಬುವುದು ಅನಿಸಿಕೆ. ಸ್ವಂತ ಸಮಸ್ಯೆಗಳನ್ನು ನೀವೇ ನಿವಾರಿಸಿಕೊಳ್ಳುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.