ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
ಮೇಷ
ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವಂಥ ಬುದ್ಧಿವಂತಿಕೆ ತೋರುವಿರಿ. ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ.
ವೃಷಭ
ಗೃಹದಲ್ಲಿ ಹೊಂದಾಣಿಕೆ ಕೊರತೆಯಿಂದ ಭಿನ್ನಾಭಿಪ್ರಾಯ ಮೂಡಿಬಂದು ದುಗುಡುತನ ಹೆಚ್ಚಾಗಲಿದೆ. ಹೊಸತನ್ನು ಸಾಧಿಸುವ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ಗಮನ ಸೆಳೆಯಲಿವೆ.
ಮಿಥುನ
ಫಲಕಾರಿ ಯೋಚನಾಲಹರಿಗಳನ್ನು ಕಂಡ ವ್ಯವಹಾರದ ಪಾಲು ದಾರರು ಮಾತಿನಂತೆಯೇ ನಡೆಯುವರು. ಕಾರ್ಯಸಾಧನೆಗೆ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕಾದ ಸನ್ನಿವೇಶ ಎದುರಾಗುತ್ತದೆ.
ಕರ್ಕಾಟಕ
ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು. ಅತಿಯಾದ ಆಲಸ್ಯತನ ಸರ್ವತೋಮುಖ ಏಳಿಗೆಗೆ ಹಾನಿ ಉಂಟುಮಾಡಲಿದೆ.
ಸಿಂಹ
ದುರ್ಬುದ್ಧಿ ಹೊಂದಿರುವ ಜನರ ಸಹವಾಸದಿಂದ ದೂರವಿರುವ ಬಗ್ಗೆ ಪ್ರಯತ್ನವಿರಲಿ. ಸಂಶೋಧಕರಿಗೆ ಕಾರ್ಯ ಪ್ರವೃತ್ತಿಯಲ್ಲಿ ದೊಡ್ಡಮಟ್ಟದಲ್ಲಿ ವಸ್ತು ನಷ್ಟ ಆಗಬಹುದು ಅಥವಾ ಸಂಶೋಧನೆಯಲ್ಲಿ ಹಿನ್ನಡೆಯಾಗುತ್ತದೆ.
ಕನ್ಯಾ
ಕಾರ್ಯದಲ್ಲಿ ಕ್ರೀಯಾಶೀಲರಾಗಿ. ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿರಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನವನ್ನೂ ಹೆಚ್ಚಿಸಿಕೊಳ್ಳುವಿರಿ.
ತುಲಾ
ಕೊಟ್ಟ ಮಾತನ್ನು ಅನಿವಾರ್ಯವಾಗಿ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಅನಾಥ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಚನೆಯನ್ನು ಮಾಡುವಿರಿ.
ವೃಶ್ಚಿಕ
ಕೆಲಸದಲ್ಲಿ ತೊಡಕು ತಾಪತ್ರಯ ಉಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ನಿರ್ದಾಕ್ಷಿಣ್ಯ ಕಾರ್ಯ ವೈಖರಿಯಿಂದ ಅಧಿಕಾರಿಗಳಿಗೂ ನಿಮಗೂ ಸಂಪರ್ಕ ದೂರಾಗುವಂತಾಗಲಿದೆ.
ಧನು
ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ. ಎಲ್ಲಾ ದಾರಿಗಳು ಸುಗಮ ಎನಿಸಿ ಎಲ್ಲಾ ಕಷ್ಟ ನಷ್ಟಗಳು ನಿವಾರಣೆಯಾಗಲಿವೆ.
ಮಕರ
ಮಗನಿಗೆ ಸದಸ್ಯತ್ವದ ಸಂಸ್ಥೆಯಿಂದ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ವಹಿಸಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ
ಕುಂಭ
ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ಇರಲಿದೆ. ಕೆಲಸಗಾರರ ಸಹಕಾರ ಸಿಗುವುದು. ಅಧಿಕ ರೀತಿಯ ಖರ್ಚು-ವೆಚ್ಚಗಳು ಬಂದರೂ ಉಳಿತಾಯಕ್ಕೆ ಕೊರತೆ ಕಾಣುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಾಣುವುದು.
ಮೀನ
ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶ ದೇವರ ಆಶೀರ್ವಾದದಿಂದ ಒದಗಿ ಬರಲಿದೆ. ಪದವಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಂಡವಾಳ ಹೂಡಬಹುದು.