ADVERTISEMENT

ದಿನ ಭವಿಷ್ಯ | ಈ ರಾಶಿಯವರಿಗೆ ವರ್ಗಾವಣೆಯ ಸಾಧ್ಯತೆಯಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಅಕ್ಟೋಬರ್ 2025, 23:26 IST
Last Updated 15 ಅಕ್ಟೋಬರ್ 2025, 23:26 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ಈ ದಿನ ನೆರವಿಗೆ ನಿಲ್ಲುವರು. ಅವರೇ ನಿಮ್ಮನ್ನು ಸರಿಯಾದ ದಾರಿಗೆ ಕರೆದೊಯ್ಯುವರು. ಕಟ್ಟಡಗಳ ಬಾಡಿಗೆಯಿಂದಾಗಿ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು.
  • ವೃಷಭ
  • ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ. ಸರ್ಕಾರಿ ಗುತ್ತಿಗೆ ಕೆಲಸಗಳು ನಿಮ್ಮದಾಗಲಿವೆ. ನಿರುದ್ಯೋಗಿಗಳಿಗೆ ಸಾಧಾರಣ ಉದ್ಯೋಗ ದೊರೆಯಲಿದೆ.
  • ಮಿಥುನ
  • ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ. ಭಾವನೆಗಳ ಮೇಲೆ ಹಿಡಿತ ಸಾಧಿಸಿ. ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದನ್ನು ನಿಲ್ಲಿಸಿ. ನೀರಿನ ಬಗ್ಗೆ ಜಾಗರೂಕತೆ ಇರಲಿ.
  • ಕರ್ಕಾಟಕ
  • ಬದಲಾವಣೆಯನ್ನು ಬಯಸಿದ ನಿಮಗೆ ಇದು ಹರ್ಷ ಸಮಯ. ಸಾಂಸಾರಿಕವಾಗಿ ಸುಖ-ದುಃಖಗಳ ಸಮ್ಮಿಶ್ರ ಫಲವನ್ನು ಅನುಭವಿಸುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುವುದು.
  • ಸಿಂಹ
  • ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಕೆಲಸದಲ್ಲಿ ತುಂಬಾ ಮಟ್ಟಿನ ಉತ್ಸಾಹವಿರುವುದು. ಸರ್ಕಾರಿ ಕೆಲಸಗಳು ನಡೆಯುವುದು ಸ್ವಲ್ಪ ವಿಳಂಬವಾಗುವುದು.
  • ಕನ್ಯಾ
  • ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ. ಸ್ವಯಂ ರಕ್ಷಣೆ ತಿಳಿದಿರುವುದರಿಂದ ಮೋಸ ಹೋಗುವ ಪ್ರಮೇಯ ಕಡಿಮೆಯಾಗಿರುತ್ತದೆ.
  • ತುಲಾ
  • ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಯಕನನ್ನು ಜಾಗೃತ ಗೊಳಿಸುವಿರಿ. ಅಧಿಕಾರದ ಇತಿ ಮಿತಿ ತಿಳಿದಿದೆ. ಹಳೆಯ ಗೆಳೆಯರ ಜೊತೆ ಮಾತುಕತೆ ನಡೆಯುವುದು. ಉತ್ಸಾಹ ಅಧಿಕಗೊಂಡಿದೆ.
  • ವೃಶ್ಚಿಕ
  • ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆ ಗುರುತಿಸಿ ಸೌಲಭ್ಯ ಒದಗಿಸಿ ಕೊಡುವರು. ನಿವೇಶನ ಕೊಳ್ಳಲು ಸೂಕ್ತಸ್ಥಳದ ಹುಡುಕಾಟ ನಡೆಸುವಿರಿ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ.
  • ಧನು
  • ವರಮಾನ ತೆರಿಗೆ ಸಿಬ್ಬಂದಿಗೆ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಗುವುದು. ಕೋರ್ಟು ವ್ಯವಹಾರದಲ್ಲಿ ನಿರೀಕ್ಷಿತವಾದ ಜಯದ ಸಿಹಿಯನ್ನು ಅನಿರೀಕ್ಷಿತ ಸೋಲಿನ ಕಹಿ ಕಸಿಯುವ ಸಾಧ್ಯತೆಗಳಿವೆ. ವರ್ಗಾವಣೆಯ ಸಾಧ್ಯತೆಯಿದೆ.
  • ಮಕರ
  • ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಮಗನಿಗೆ ಸಂಸ್ಥೆಯಿಂದ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಆಕಸ್ಮಿಕ ಧನಾಗಮನದಿಂದ ಬಾಕಿ ಇರಿಸಿದ ವ್ಯವಹಾರವು ಪೂರ್ಣಗೊಳ್ಳುವುದು.
  • ಕುಂಭ
  • ಬಡ್ತಿ ಅವಕಾಶವನ್ನು ಕೈತಪ್ಪದಂತೆ ನೋಡಿಕೊಳ್ಳಿ. ಭಕ್ತಿಯಿಂದ ಈಶ್ವರನನ್ನು ಆರಾಧಿಸಿ ಶುಭವಾಗುವುದು. ಹೆಂಡತಿಯ ಆರೋಗ್ಯದ ಬಗ್ಗೆ ಅನಗತ್ಯ ಭೀತಿ ಬೇಡ. ಆಹಾರ ಪದ್ಧತಿ ಬದಲಿಸಿಕೊಳ್ಳಿ.
  • ಮೀನ
  • ಇಂದಿನ ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿವೆ. ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ಅನುಕೂಲ ಉಂಟಾ ಗುವುದು. ಪತಿ ಪತ್ನಿಯ ಅನ್ಯೋನ್ಯತೆಯ ಕನಸು ನನಸಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.