ADVERTISEMENT

ದಿನ ಭವಿಷ್ಯ: ಆಗಸ್ಟ್ 19 ಮಂಗಳವಾರ 2025– ಅವಿವಾಹಿತ ಹೆಣ್ಣು ಮಕ್ಕಳಿಗೆ ಕಂಕಣಬಲ!

ದಿನ ಭವಿಷ್ಯ: ಆಗಸ್ಟ್ 19 ಮಂಗಳವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಆಗಸ್ಟ್ 2025, 18:33 IST
Last Updated 18 ಆಗಸ್ಟ್ 2025, 18:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅವಿವಾಹಿತ ಹೆಣ್ಣು ಮಕ್ಕಳಿಗೆ ಅನಿರೀಕ್ಷಿತವಾಗಿ ಕಂಕಣಬಲ ಕೂಡಿಬರುವುದು. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಸ್ವವಿಮರ್ಶೆಯಿಂದ ತಪ್ಪುಗಳು ಗೋಚರವಾಗಲಿವೆ.
  • ವೃಷಭ
  • ಎಂಥ ಅನಿವಾರ್ಯ ಪರಿಸ್ಥಿತಿಯಲ್ಲಿಯೂ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ತಿಳಿಯಿರಿ. ನಿಧಾನವಾಗಿಯಾದರೂ ಲಾಭ ಬಂದು ಕೈ ಸೇರಲಿದೆ.
  • ಮಿಥುನ
  • ಸಮಯವನ್ನು ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ತರಲಿದೆ.
  • ಕರ್ಕಾಟಕ
  • ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದುವರಿಯಲು ಸಹಾಯವಾಗುತ್ತದೆ. ಹಂತಹಂತವಾಗಿ ಸುಧಾರಿಸಲಿರುವ ಪರಿಸ್ಥಿತಿ ನಿರಾಶೆಯನ್ನು ತರದು. ಮಕ್ಕಳ ಅಗತ್ಯಗಳನ್ನು ಪೂರೈಸಿ.
  • ಸಿಂಹ
  • ಆಲಸ್ಯತನ ದೂರಮಾಡಿ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಕಂಪ್ಯೂಟರ್ ಅಧ್ಯಯನ ಮಾಡುವ ಬಗ್ಗೆ ಅಥವಾ ಬೇರೆ ಬೇರೆ ಭಾಷೆ ಕಲಿಯುವ ಬಗ್ಗೆ ಯೋಚಿಸಿ. ಭವಿಷ್ಯಕ್ಕೆ ಅನುಕೂಲ ಮಾಡಿಕೊಡುವುದು.
  • ಕನ್ಯಾ
  • ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರಲಿದೆ. ನ್ಯಾಯಾಲಯದ ಮೆಟ್ಟಿಲೇರಿದ ನಿಮ್ಮ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿ ಕೊಳ್ಳಿ. ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಶುಭ ತರಲಿದೆ.
  • ತುಲಾ
  • ಸ್ತ್ರೀವರ್ಗದಿಂದ ಸಹಾಯ ಪ್ರಾಪ್ತ. ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಅನುಭವಕ್ಕೆ ಬರಲಿದೆ. ಮಕ್ಕಳ ಯಶಸ್ಸನ್ನು ಕಂಡು ಸಂಭ್ರಮಿಸುವಿರಿ.
  • ವೃಶ್ಚಿಕ
  • ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ವರ್ಧಿಸಲಿದೆ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ. ಕೌಟುಂಬಿಕ ವಿಷಯಗಳಲ್ಲಿ ಬದಲಾವಣೆ ಕಾಣಲಿದೆ.
  • ಧನು
  • ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ನಿಮ್ಮ ಸುತ್ತಲಿನ ವಾತಾವರಣ ಸಂತಸದಾಯಕ. ಬ್ಯಾಂಕ್ ಅಧಿಕಾರಿಗಳಿಗೆ ಎದುರಾಗುವ ವರ್ಗಾವಣೆ ತಲೆನೋವು ತರಿಸಬಹುದು.
  • ಮಕರ
  • ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಮೂಡಲಿದೆ. ಮಕ್ಕಳೊಡನೆ ಉಪಯುಕ್ತ ಸಮಯ ಕಳೆಯುವಿರಿ. ಅಪರೂಪದ ಹಾಗೂ ‌ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ.
  • ಕುಂಭ
  • ಕೌಟುಂಬಿಕ ನೆಮ್ಮದಿ ಸಮೃದ್ಧಿಯಾಗಿದ್ದರೂ ಕಿರಿಕಿರಿ ತಪ್ಪದಂತಾಗಲಿದೆ. ಅನಾರೋಗ್ಯ ಸ್ಥಿತಿಯು ಎದುರಾಗಿ ಆರ್ಥಿಕವಾಗಿ ಧನ ವ್ಯಯವಾಗಲಿದೆ. ಸತ್ಫಲಗಳಿಗೆ ಶ್ರೀಲಕ್ಷ್ಮಿನರಸಿಂಹನ ಸೇವೆಯು ಅನುಕೂಲವಾಗಲಿದೆ.
  • ಮೀನ
  • ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಮಕ್ಕಳ ಓದಿಗಾಗಿ ಗಮನ ಹರಿಸ ಬೇಕಾಗುವುದು. ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಕಮಿಷನ್ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.