ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಭಾವಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಫೆಬ್ರುವರಿ 2026, 23:30 IST
Last Updated 23 ಫೆಬ್ರುವರಿ 2026, 23:30 IST
ಮೇಷ
ಸವಾಲನ್ನು ಎದುರಿಸುವ ಶಕ್ತಿ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಪ್ರಭಾವಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ. ಹೊಸ ಗೆಳೆತನ ಬೆಳೆಸಿಕೊಳ್ಳುವಿರಿ.
ವೃಷಭ
ಜೀವವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಯಶೋದಾಯಕವಾಗಿರುತ್ತದೆ. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ.
ಮಿಥುನ
ಮನೆಯವರ ಸಹಾಯದಿಂದ ಹಣಕಾಸಿನ ತೊಂದರೆಗಳು ದೂರಾಗಿ ಹೊಸ ಯೋಜನೆಗೆ ಚಾಲನೆ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವಿರಿ.
ಕರ್ಕಾಟಕ
ಉದಾರ ಮನೋಭಾವ ವ್ಯವಹಾರದಲ್ಲಿ ನಷ್ಟ ಅಥವಾ ಸೋಲೆನಿಸಿದರೂ, ಮುಂದಿನ ದಿನಗಳಲ್ಲಿ ಅನುಕೂಲವನ್ನು ಒದಗಿಸಲಿದೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.
ಸಿಂಹ
ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಕಂಡುಬಂದಲ್ಲಿ ನಿರ್ಲಕ್ಷಿಸುವುದು ಅಥವಾ ಮನೆಮದ್ದು ಮಾಡುವುದು ಸರಿಯಲ್ಲ. ನೂತನ ಯೋಜನೆ ಬಗ್ಗೆ ಚರ್ಚೆಗೆ ಸೂಕ್ತವಾಗಿರುತ್ತದೆ.
ಕನ್ಯಾ
ಅಧಿಕಾರಿಗಳ ಮನಸ್ಸಿನ ಪರಿಸ್ಥಿತಿ ಅವಲೋಕಿಸಿಕೊಂಡು ಚರ್ಚಿಸುವ ಮುಂದಿನ ಹೆಜ್ಜೆ ಇರಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನಸ್ಸಾಗುವುದು. ಬಡಗಿ ಕೆಲಸ ಮಾಡುವವರಿಗೆ ಸುಯೋಗದ ದಿನ.
ತುಲಾ
ತಪ್ಪುಗಳನ್ನು ಸಮರ್ಥಿಸಿಕೊಳ್ಳುವಂಥ ಕೆಲಸದ ಬದಲು ತಪ್ಪನ್ನು ಸರಿಪಡಿಸಿಕೊಳ್ಳುವ ಬಗ್ಗೆ ಆಲೋಚನೆಗಳು, ದೈಹಿಕ ಶ್ರಮವಿರಲಿ. ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
ವೃಶ್ಚಿಕ
ಸಂಘ ಸಂಸ್ಥೆಗಳ ಸಭೆಗಳಲ್ಲಿ ಮಾತಿಗೆ ಬೆಲೆ ಇಲ್ಲದಂತೆ ಅಥವಾ ಮಾತನ್ನು ಅಪಾರ್ಥವಾಗಿ ಕಲ್ಪಿಸಿಕೊಂಡು ದೂಷಿಸುವಂತಹ ಘಟನೆಗಳು ಸಂಭವಿಸಬಹುದು. ಧಾರ್ಮಿಕ ನಾಯಕರಿಗೆ ಶುಭವಾಗುವುದು.
ಧನು
ಲೇವಾದೇವಿ ವ್ಯವಹಾರದವರಿಗೆ ನಂಬಿಕೆದ್ರೋಹದಂಥ ಘಟನೆಗಳು ನಡೆಯಬಹುದು. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ. ಆಫೀಸಿನ ಕೆಲಸಕ್ಕಾಗಿ ವಿದೇಶಯಾನ ಮಾಡಬೇಕಾಗಬಹುದು.
ಮಕರ
ಲೋಪ ದೋಷಗಳನ್ನು ತಿದ್ದಿ ಕೊಳ್ಳುವಂತೆ ಹಿರಿಯರಿಂದ ಸೂಚನೆ, ಅವರ ಅನುಭವದ ಮಾತು ಒದಗಿಬರುವುದು. ಹರಾಜಿನಲ್ಲಿ ಆಸ್ತಿ ಖರೀದಿ ಎನ್ನುವ ರೀತಿಯಲ್ಲಿ ಸಂಪತ್ತು ಅಭಿವೃದ್ಧಿಯಾಗಲಿದೆ.
ಕುಂಭ
ಪ್ರಗತಿಯನ್ನು ಎಲ್ಲೆಡೆಯೂ ಪ್ರಶಂಸಿಸುತ್ತಿರುವುದರಿಂದ ಕಾರ್ಯ ಕ್ಷೇತ್ರದಲ್ಲಿ ಹೊಸದೊಂದು ಹುಮ್ಮಸ್ಸು ಬರುವುದರ ಜೊತೆಗೆ ವೃತ್ತಿಪರ ಶತ್ರುಗಳ ಸಂಖ್ಯೆ ಹೆಚ್ಚಲಿದೆ. ಧನಾದಾಯದ ಮಾರ್ಗವು ಗೋಚರಿಸಲಿದೆ.
ಮೀನ
ಹುಟ್ಟೂರಿನಲ್ಲಿ ಕೃಷಿ ಮಾಡುವ ಅಥವಾ ಕೃಷಿ ಭೂಮಿ ಖರೀದಿಸುವ ಆಲೋಚನೆ ನೆರವೇರುವುದು. ಮನೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೆ ಹಾನಿಯುಂಟಾಗಲಿದೆ.