ADVERTISEMENT

ದಿನ ಭವಿಷ್ಯ: ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬುದ್ಧಿವಂತ, ತಿಳಿವಳಿಕೆ ಹೊಂದಿದವರಾಗಿದ್ದರೂ ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ಗೃಹದಲ್ಲಿ ಶುಭ, ಮಂಗಳಕಾರ್ಯ ಚಟುವಟಿಕೆಗಳು ತೋರಿ ಬರಲಿವೆ.
  • ವೃಷಭ
  • ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು. ಕಲಾ ಸೇವೆಯನ್ನು ಗುರುತಿಸಿ ಪ್ರಶಂಸೆ ಹಾಗೂ ಸನ್ಮಾನ ದೊರೆಯಲಿದೆ. ಸ್ವತಃ ಆರೈಕೆ ಮಾಡಿಕೊಳ್ಳುವುದು ಉತ್ತಮ.
  • ಮಿಥುನ
  • ವಿದ್ಯಾರ್ಜನೆಗೆಂದು ಪರ ಊರಿಗೆ ಹೋದ ನೀವು ಹಾದಿ ತಪ್ಪಿದ್ದು ಹೆತ್ತವರಿಗೆ ಸಂಕಟವನ್ನು ಉಂಟು ಮಾಡುವುದು. ಮನೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಬಹುದು. ಶೀತ ಬಾಧೆಯು ನಿಮ್ಮನ್ನು ಕಾಡಬಹುದು.
  • ಕರ್ಕಾಟಕ
  • ನಿದ್ದೆಯ ಅಭಾವದಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ತಂದೆಯ ಮನಸ್ಸಿಗೆ ನೋವಾಗುವ ಸಂಗತಿ ನಡೆಯಲಿದೆ. ಗಣೇಶನ ಪೂಜೆಯಿಂದ ದಿನವನ್ನು ಪ್ರಾರಂಭಿಸಿ.
  • ಸಿಂಹ
  • ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಸಿದ್ಧಿಸಲಿವೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅಧಿಕ ಲಾಭಾಂಶ ಹೊಂದುವಿರಿ. ಎಲ್ಲರ ಒಪ್ಪಿಗೆಯಂತೆ ವಿವಾಹ ನಡೆಸಿರಿ.
  • ಕನ್ಯಾ
  • ಮುಖ್ಯ ವ್ಯಕ್ತಿ ನೀಡಿದ ಉಡುಗೊರೆಯೊಂದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಭಾಷಾ ಅಧ್ಯಾಪಕರಿಗೆ ಉದ್ಯೋಗದಲ್ಲಿ ಅಸ್ಥಿರತೆ ಉಂಟಾ ಗುವುದು. ದೈನಂದಿನ ಕೆಲಸ ಕಾರ್ಯಗಳಲ್ಲಿ ಬದಲಾವಣೆ ಇರುವುದಿಲ್ಲ.
  • ತುಲಾ
  • ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಜೀವನಶೈಲಿಯೇ ಬದಲಾಗುತ್ತದೆ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ನಿರುತ್ತರರಾಗುತ್ತೀರಿ. ತಾಳ್ಮೆಯ ಪರೀಕ್ಷೆ ಆಗಬಹುದು.
  • ವೃಶ್ಚಿಕ
  • ದೇವತಾ ಕಾರ್ಯದ ಹೆಸರಿನಲ್ಲಿ ಕಠಿಣ ವ್ರತ ಆಚರಣೆಯನ್ನು ಮಾಡುವಲ್ಲಿ ಆರೋಗ್ಯವನ್ನು ಕಡೆಗಾಣಿಸಬೇಡಿ. ಮನೆಯಲ್ಲಿ ಅಣ್ಣ-ತಮ್ಮಂದಿರ ಆಂತರಿಕ ವ್ಯವಹಾರಗಳು ಒಂದು ಹಂತ ತಲುಪುತ್ತವೆ.
  • ಧನು
  • ಕೌಶಲವನ್ನು ತೋರಲು ಹೆಚ್ಚಿನ ಅವಕಾಶಗಳು ಎದುರಾಗಲಿವೆ. ಯಾವುದೋ ಮೂಲದಿಂದ ಬಂದ ಹಣ ದೇವ ಕಾರ್ಯಗಳಿಗೆ ಉಪಯೋಗಿಸಿ. ಸಂಘ ಸಂಸ್ಥೆಗಳ ಪದಾಧಿಕಾರ ದೊರಕುವುದು.
  • ಮಕರ
  • ಕುಟುಂಬದವರ ಮಾತುಗಳಿಗೆ ಬೆಲೆ ಕೊಡುವುದು ಮತ್ತು ಎಲ್ಲರಲ್ಲೂ ಸಹನೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ. ಸಹೋದರರ ಬಗ್ಗೆ ನಿಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಮಾಡಿ.
  • ಕುಂಭ
  • ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ಬಂಧುಗಳು ಸಂಬಂಧ ಕೋರಿ ಬರಲಿದ್ದಾರೆ. ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ.
  • ಮೀನ
  • ಕೇವಲ ನಿಮ್ಮ ಬಗ್ಗೆ ಯೋಚಿಸುವುದನ್ನು ಬಿಟ್ಟು ಇತರ ಕುರಿತು ಕಾಳಜಿ ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳುವಿರಿ. ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.