ಬೆಂಗಳೂರು: ‘ಅಡಿಗಾಸ್ ಯಾತ್ರಾ’ ಸಂಸ್ಥೆಯು ಪ್ರವಾಸೋದ್ಯಮ ಹಾಗೂ ಪ್ರವಾಸಿಗರನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಹೆಸರಾಂತ ಪ್ರವಾಸಿ ತಾಣಗಳ ಪ್ರವಾಸಗಳಿಗೆ ಭಾರಿ ರಿಯಾಯತಿ ಪ್ರಕಟಿಸಿದೆ.
ಈ ಪ್ರವಾಸಿ ಯೋಜನೆಯಡಿ ಈಗ ಕಾಯ್ದಿರಿಸಿದವರಿಗೆ 2021ರ ಸೆಪ್ಟೆಂಬರ್ ರವರೆಗೆ ರಿಯಾಯಿತಿ ನೀಡಲಾಗುವುದು. ಎಲ್ಲ ಪ್ರವಾಸಗಳಿಗೆ 2021ರ ಮಾರ್ಚ್ವರೆಗೆ ಹಳೆಯ ಪ್ರವಾಸಿ ಕೈಪಿಡಿಯ ದರವೇ ಅನ್ವಯವಾಗಲಿದೆ.
ಕೋವಿಡ್ನ ಪ್ರಸ್ತುತ ಸ್ಥಿತಿಗತಿ
ಯನ್ನು ಗಣನೆಗೆ ತೆಗೆದುಕೊಂಡು ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದ ಅನ್ವಯ ಹೊಸ ಸುರಕ್ಷಾ ಕ್ರಮಗಳೊಂದಿಗೆ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾಸಿಗರ ಬಜೆಟ್ಗೆ ಅನುಗುಣವಾಗಿ ಡಿಲಕ್ಸ್, ಲಕ್ಸುರಿ, ಪ್ರೀಮಿಯಂ ಪ್ರವಾಸಗಳನ್ನು ವ್ಯವಸ್ಥೆ ಮಾಡಲಾಗುವುದು.
‘ತೀರ್ಥಕ್ಷೇತ್ರಗಳಾದ ಕಾಶಿ -ಗಯಾ, ಮಥುರಾ, ದ್ವಾರಕಾ, ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳು, ಮಧ್ಯಪ್ರದೇಶದ ಪ್ರವಾಸಿ ತಾಣಗಳು, ಅಂಡಮಾನ್, ರಾಜಸ್ಥಾನ, ಗುಜರಾತ್, ಈಶಾನ್ಯ ರಾಜ್ಯಗಳ ಪ್ರವಾಸಗಳು, ಪ್ರಾಕೃತಿಕ ಸೌಂದರ್ಯದ ಶಿಮ್ಲಾ, ಮನಾಲಿ, ನೈನಿತಾಲ್, ಮೇಘಾಲಯ, ಸಿಕ್ಕಿಂ, ಡಾರ್ಜಿಲಿಂಗ್ನಂತಹ ಪ್ರವಾಸಗಳು, ಹನಿಮೂನ್ ಪ್ಯಾಕೇಜ್ಗಳು ನಮ್ಮಲ್ಲಿ ಲಭ್ಯ ಇವೆ’ ಎಂದು ಸಂಸ್ಥೆಯ ನಿರ್ದೇಶಕ ಕೆ.ನಾಗರಾಜ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಅಡಿಗಾಸ್ ಯಾತ್ರಾ, ನಂ. 144, 3ನೇ ಮಹಡಿ, ದುರ್ಗಾ ಮ್ಯಾನ್ಷನ್, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು, ದೂರವಾಣಿ: 080- 26616678/ 9611600810, ಮಲ್ಲೇಶ್ವರ - 080- 23346678 / 7022259003, ಹುಬ್ಬಳ್ಳಿ: 0836- 2256678/ 8095800701.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.