
ಪ್ರಜಾವಾಣಿ ವಾರ್ತೆ
ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ವಾರಿಯರ್ಸ್ ನಡುವೆ ಶುಕ್ರವಾರ ನಡೆದ ಐಪಿಎಲ್ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿ ಕಳೆದ ಸಲದಂತೆ ಮಳೆಗೆ ಆಹುತಿಯಾಗುತ್ತದೆ ಎಂಬ ಅಭಿಮಾನಿಗಳ ಭೀತಿ ಸುಳ್ಳಾಯಿತು. ಬದಲಿಗೆ ಮಳೆರಾಯ ಬಿಡುವು ಕೊಟ್ಟಿದ್ದರಿಂದ ಸುಸೂತ್ರವಾಗಿ ಮುಂದುವರೆಯಿತು.
ಈ ಸಂದರ್ಭದಲ್ಲಿ ಚಿಯರ್ ಗರ್ಲ್ಸ್ಗಳ ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರೇಕ್ಷಕರ ಮನ ತಣಿಸಿತು. ಮತ್ತೊಂದೆಡೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿ ತಮ್ಮ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.