ADVERTISEMENT

ಬಾಲರಾಮಾಯಣಂ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಬಸವನಗುಡಿಯ ಸಾಕಮ್ಮ ಗಾರ್ಡನ್‌ನಲ್ಲಿರುವ ವೇದಾಂತ ಸತ್ಸಂಗ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿ.ಎನ್.ನಾಗರತ್ನ ಅವರು ಕೆ.ಜಿ. ಸುಬ್ರಾಯಶರ್ಮಾ ಅವರ `ಬಾಲರಾಮಾಯಣಂ~ ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಸುಬ್ರಾಯಶರ್ಮಾ ಅವರು ವಾಲ್ಮೀಕಿ ರಾಮಾಯಣದಿಂದ 48 ಮುಖ್ಯವಾದ ಶ್ಲೋಕಗಳನ್ನು ಆಯ್ದು ಅದರ ತಾತ್ಪರ್ಯವನ್ನು ಸರಳವಾಗಿ ತಿಳಿಸಿದ್ದಾರೆ. ಉಷಾ ವೇಣುಗೋಪಾಲ್ ಕೃತಿ ಪರಿಚಯ ಮಾಡಿದರು. ಡಿ.ದಕ್ಷಿಣಾಮೂರ್ತಿ, ಸದಾನಂದಗಿರಿ ಸ್ವಾಮೀಜಿ, ಎಸ್.ರಾಜರಾಜೇಶ್ವರಿ ಶರ್ಮಾ, ಡಿ.ಶಾಮಣ್ಣ, ಮಂಜುನಾಥ್ ಮತ್ತಿತರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.