ರಂಗಶಂಕರ: ಗುರುವಾರ ಪ್ರಯೋಗರಂಗ ತಂಡದಿಂದ ‘ಸೀನಿಯರ್ ಸಿಟಿಜನ್’ (ರಚನೆ, ನಿರ್ದೇಶನ: ಪಾಲ್ ಸುದರ್ಶನ್) ನಾಟಕ.
ಶುಕ್ರವಾರ ಕ್ರಿಯೇಟಿವ್ ಥಿಯೇಟರ್ ತಂಡದಿಂದ ‘ಗುಂಡಾಯಣ’ ಎಂಬ ಸದಭಿರುಚಿಯ ಹಾಸ್ಯ ನಾಟಕ. ಇದು ಖ್ಯಾತ ಹಾಸ್ಯ ಲೇಖಕ ನಾ. ಕಸ್ತೂರಿ ಅವರ ವಿಶಿಷ್ಟ ಕಾದಂಬರಿ ‘ಚಕ್ರದೃಷ್ಟಿ’ ಆಧಾರಿತ. ತಮ್ಮ ವಿನೂತನ ಶೈಲಿಗೆ ಪ್ರಸಿದ್ಧರಾದ ಜೋಸೆಫ್ ಅವರ ನಿರ್ದೇಶನದಲ್ಲಿ ಸಿದ್ಧವಾಗಿದೆ. ವಿಶೇಷ ಎಂದರೆ ಇದರಲ್ಲಿ ಮೂಡಿಬರುವ ಹತ್ತು ವಿಭಿನ್ನ ಪಾತ್ರಗಳನ್ನು ಕಲಾವಿದರಾದ ಸುಂದರ್ ಹಾಗೂ ಲಕ್ಷ್ಮಿ ಚಂದ್ರಶೇಖರ್ ಇವರಿಬ್ಬರೇ ನಿರ್ವಹಿಸಿರುವುದು. ಟಿಕೆಟ್ ದರ 70 ರೂ. ಮುಂಗಡ ಬುಕಿಂಗ್ಗೆ: 96206 04479.
ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. ಮಾಹಿತಿಗೆ: 98451 68802.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.