ಮಿಡತೆ ದಾಳಿ ದೇಶದಲ್ಲಿ ಭಾರಿ ಸುದ್ದಿಯಲ್ಲಿದೆ. ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮೊದಲಾದೆಡೆ ಹೊಲಗಳಲ್ಲಿ ಬೆಳೆದ ಫಸಲಿಗೆ ಅವು ಲಗ್ಗೆಯಿಟ್ಟಿವೆ. ಹಾರುವ ಕೀಟಗಳು ಜನರ ಮೇಲೂ ದಾಳಿ ಮಾಡುತ್ತಿದ್ದು, ಭಾರತ, ಚೀನಾ, ಇರಾನ್ನಲ್ಲಿ ಜನರು ಸಾಯುತ್ತಿದ್ದಾರೆ.ಜನರು ಬೀದಿಯಲ್ಲಿ ಸತ್ತು ಬಿದ್ದಿರುವ ದೃಶ್ಯಗಳಿರುವ ವಿಡಿಯೊ ಹರಿದಾಡುತ್ತಿದೆ.
ದೇಶದಲ್ಲಿ ಮಿಡತೆ ಹಾವಳಿ ನಿಜವಾದರೂ, ಅವುಗಳ ದಾಳಿಯಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ. ಮಿಡತೆಗಳು ಬೆಳೆಯನ್ನು ಹಾಳು ಮಾಡುತ್ತವೆಯೇ ವಿನಾ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಈ ಸಂಬಂಧ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿರುವ ವಿಡಿಯೊ ವಿಶಾಖಪಟ್ಟಣದ್ದು. ಇತ್ತೀಚೆಗೆ ಸಂಭವಿಸಿದ ಅನಿಲ ಸೋರಿಕೆ ವೇಳೆ ಜನರು ಅಸ್ವಸ್ಥರಾಗಿ ಬೀಳುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಮಿಡತೆ ದಾಳಿಗೂ ಈ ವಿಡಿಯೋಗೂ ಸಂಬಂಧವಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.