ADVERTISEMENT

ಅಧಿಕಾರ ವಹಿಸಿಕೊಂಡ ಶ್ರೀ ವಿಜಯೇಂದ್ರ ಸರಸ್ವತೀ

ಪಿಟಿಐ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಕಾಂಚೀಪುರಂ: ಕಾಂಚೀ ಮಠದ 69 ಪೀಠಾಧಿಪತಿ ಜಯೇಂದ್ರ ಸರಸ್ವತೀ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಶ್ರೀ ವಿಜಯೇಂದ್ರ ಸರಸ್ವತೀ ಅವರು ಅಧಿಕಾರ ವಹಿಸಿಕೊಂಡರು ಎಂದು ಮಠದ ಮೂಲಗಳು ಶುಕ್ರವಾರ ತಿಳಿಸಿವೆ.

‘ಮಠದ 70ನೇ ಪೀಠಾಧಿಪತಿಗಳಾದ ಶ್ರೀ ವಿಜಯೇಂದ್ರ ಸರಸ್ವತೀ (48) ಅವರು ತಮ್ಮ ಕರ್ತವ್ಯದ ಬಗೆಗೆ ಅಧ್ಯಯನ ಆರಂಭಿಸಿದ್ದಾರೆ’ ಎಂದು ಮಠ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಜಯೇಂದ್ರ ಸರಸ್ವತೀ ಅವರು ಬುಧವಾರ ಬೃಂದಾವನಸ್ಥರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.