ಮುಂಬೈ (ಪಿಟಿಐ): ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದ ಭೂಕಂಪನ ಬುಧವಾರ ಅರಬ್ಬಿ ಸಮುದ್ರದಲ್ಲೂ ಅನುಭವವಾಯಿತು.
ಮುಂಬೈನಿಂದ 155 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಮುಂಬೈ ಹವಾಮಾನ ಇಲಾಖೆ ನಿರ್ದೇಶಕ ರಾಜೀವ್ ನಾಯರ್ ತಿಳಿಸಿದರು. ಉತ್ತರ ಮುಂಬೈನ ಕೆಲವೆಡೆ ಭೂಕಂಪನದ ಅನುಭವವಾಯಿತು.
ಪಣಜಿ ವರದಿ: ದೇಶದ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಮುನ್ಸೂಚನೆ ನೀಡದಿದ್ದರೂ ಗೋವಾ ಸರ್ಕಾರ ಪ್ರವಾಸಿಗಳು ಹಾಗೂ ಕರಾವಳಿ ನಿವಾಸಿಗಳು ಕಡಲ ತೀರಕ್ಕೆ ತೆರಳದಂತೆ ಎಚ್ಚರಿಕೆಯ ಸಂದೇಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.